Friday, August 7, 2026

BDA Apartments

Home Front Page BSY ಅಭಿಮಾನೋತ್ಸವ: ಬಿವೈವಿ ಎಚ್ಚರಿಕೆ ಹೆಜ್ಜೆ ಇಟ್ಟರೆ ಒಳ್ಳೆಯದು- ಸಚಿವ ಸತೀಶ್ ಜಾರಕಿಹೊಳಿ

BSY ಅಭಿಮಾನೋತ್ಸವ: ಬಿವೈವಿ ಎಚ್ಚರಿಕೆ ಹೆಜ್ಜೆ ಇಟ್ಟರೆ ಒಳ್ಳೆಯದು- ಸಚಿವ ಸತೀಶ್ ಜಾರಕಿಹೊಳಿ

ದಾವಣಗೆರೆ,ಮೇ,8,2026 (www.justkannada.in): ಅಧಿಕಾರದಿಂದ ಕೆಳಗಿಳಿಸಿದವರೇ ಬಿಎಸ್ ವೈ ಅಭಿಮಾನೋತ್ಸವ ಮಾಡುತ್ತಿದ್ದಾರೆ. ಬಿವೈ ವಿಜಯೇಂದ್ರ ಎಚ್ಚರಿಕೆಯ ಹೆಜ್ಜೆ ಇಟ್ಟರೇ ಒಳ್ಳೆಯದಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳೀ, ಬಿಎಸ್ ವೈ ಅಭಿಮಾನೋತ್ಸವ ನಡೆಯುತ್ತಿದೆ ಸಂತೋಷ.  ಬಿಎಸ್ ವೈ ಹೋರಾಟ ಮಾಡಿ ಮೇಲೆ ಬಂದಿದ್ದಾರೆ. ಅಧಿಕಾರದಿಂದ ಕೆಳಗಿಳಿಸಿದವರೇ ಅಭಿಮಾನೋತ್ಸವ ಮಾಡುತ್ತಿದ್ದಾರೆ  ಬಿವೈ ವಿಜಯೇಂದ್ರ ಎಚ್ಚರಿಕೆ ಹಜ್ಜೆ ಇಟ್ಟರೆ ಒಳ್ಳೆಯದು ಎಂದರು. ಸತೀಶ್

ತಮಿಳುನಾಡು ರಾಜಕೀಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳೀ, ಹೆಚ್ಚು ಸ್ಥಾನ ಗೆದ್ದವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು  ಅದೇ ರೀತಿ ವಿಜಯ್ ರಾಜ್ಯಪಾಲರನ್ನ ಭೇಟಿ ಮಾಡಿದ್ದಾರೆ ತಮಿಳುನಾಡು ರಾಜ್ಯಪಾಲರು ನಡೆದುಕೊಂಡ ರೀತಿ ನಿಜಕ್ಕೂ ತಪ್ಪು ಎಂದು ಖಂಡಿಸಿದರು.

ನಾಯಕತ್ವ ಬದಲಾವಣೆ ವಿಚಾರ ಇಷ್ಟರಲ್ಲಿಯೇ ಗೊಂದಲಗಳಿಗೆ ತೆರೆಬೀಳಲಿದೆ ಪಕ್ಷದ ವರಿಷ್ಠರು ಚರ್ಚೆ ಮಾಡುತ್ತಿದ್ದಾರೆ.  ಗೊಂದಲಕ್ಕೆ ತೆರೆ ಬೀಳಲಿದೆ ಎಂದರು.

Key words: BSY Abhimanotsav, BY Vijayendra, Minister, Sathish Jarkiholi