Sunday, August 2, 2026

BDA Apartments

Home Crime ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹತ್ಯೆ : ಲಷ್ಕರ್ ಪೊಲೀಸರಿಂದ ಆರೋಪಿ ಬಂಧನ 

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹತ್ಯೆ : ಲಷ್ಕರ್ ಪೊಲೀಸರಿಂದ ಆರೋಪಿ ಬಂಧನ 

ಮೈಸೂರು,ನವೆಂಬರ್,11,2020(www.justkannada.in) : ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಲಷ್ಕರ್ ಪೊಲೀಸರು ಬಂಧಿಸಿದ್ದಾರೆ.kannada-journalist-media-fourth-estate-under-loss

ಶ್ರೀರಂಗಪಟ್ಟಣ ತಾಲ್ಲೂಕಿನ ಹನುಮಂತನಗರದ ನಿವಾಸಿ ಆಲ್ವೀನ್ (೩೬) ಬಂಧಿತ ಆರೋಪಿ. ಈ ಅ.೧೭ರಂದು ತಾನು ವಾಸವಿದ್ದ ವೀರನಗೆರೆಯ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದಾಗ ಬಿಡಿಸಲು ಬಂದ ಎದುರು ಮನೆಯ ಮಹದೇವಮ್ಮ ಎಂಬವರಿಗೆ ಕಾಲಿನಿಂದ ಒದ್ದು, ತಲೆಯನ್ನು ಗೋಡೆಗೆ ಗುದ್ದಿಸಿ, ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ತಲೆ ಮರೆಸಿಕೊಳ್ಳುವ ಉದ್ದೇಶದಿಂದ ವೀರನಗೆರೆಯ ಮನೆಯನ್ನು ಖಾಲಿ ಮಾಡಿ ಶ್ರೀರಂಗಪಟ್ಟಣದಲ್ಲಿ ಮನೆ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಶ್ರೀರಂಗಪಟ್ಟಣದ ಬಸ್ ಸ್ಟ್ಯಾಂಡ್ ಬಳಿ ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಆರೋಪಿ ಅಲ್ವಿನ್‌ ವಿನಾಕಾರಣ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಮಾಡುವ ಪ್ರವೃತಿ ಉಳ್ಳವನಾಗಿದ್ದು, ಈ ಹಿಂದೆ ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣೆ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಕೊಲೆ ಬೆದರಿಕೆ ಪ್ರಕರಣಗಳು ದಾಖಲಾಗಿ, ಜೀವಾವಧಿ ಶಿಕ್ಷೆ ಅನುಭಸಿ ಸೆಪ್ಟೆಂಪರ್ ತಿಂಗಳಲ್ಲಿ ಕಾರಾಗೃಹದಿಂದ ಬಿಡುಗಡೆ ಆಗಿರುತ್ತಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

Woman-slaughtered-petty-easons-Arrested-Lashkar-police

key words : Woman-slaughtered-petty-easons-Arrested-Lashkar-police