Sunday, September 13, 2026

BDA Apartments

ತಮಿಳುನಾಡಿಗೆ ನೀರು: ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಕುಸಿತ BDA JK_Adv BDA Adv
Home Front Page ತಮಿಳುನಾಡಿಗೆ ನೀರು: ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಕುಸಿತ.

ತಮಿಳುನಾಡಿಗೆ ನೀರು: ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಕುಸಿತ.

ಮಂಡ್ಯ,ಸೆಪ್ಟಂಬರ್,25,2023(www.justkannada.in):  ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಲಾಶಯಗಳು ಭರ್ತಿಯಾಗದೇ ರಾಜ್ಯದ ರೈತರು ಜನರು  ಸಂಕಷ್ಟದಲ್ಲಿದ್ದರೂ ಸಹ  ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿರುವ ಹಿನ್ನೆಲೆ  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿದಿದೆ.

ಕೆಆರ್ ಎಸ್  ಜಲಾಶಯದ ಇಂದಿನ ನೀರಿನ ಮಟ್ಟ 96.70 ಅಡಿ ಇದೆ. ಕೆಆರ್​ಎಸ್​ ಜಲಾಶಯದ ಗರಿಷ್ಠಮಟ್ಟ 124.80 ಅಡಿ ಆಗಿದೆ. ಜಲಾಶಯಕ್ಕೆ ಒಳಹರಿವು 5993 ಕ್ಯೂಸೆಕ್ ಇದ್ದು ಹೊರಹರಿವು 6716 ಕ್ಯೂಸೆಕ್ ಬಿಡಲಾಗುತ್ತಿದೆ.ತಮಿಳುನಾಡಿಗೆ ನೀರು krs krs 1

ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ದಿನೇ ದಿನೇ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದು. ರೈತರು ಜನರಿಗೆ ಆತಂಕ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ.

Key words: Water – Tamil Nadu-KRS Dam -water level -decline.