ಟಿವಿ, ಫ್ರಿಡ್ಜ್ ಬಡವರು ಇಡಬಾರ್ದಾ…? ಸಚಿವ ಉಮೇಶ್ ಕತ್ತಿಗೆ ಶಾಸಕ ಎಂ.ಪಿ  ರೇಣುಕಾಚಾರ್ಯ ಟಾಂಗ್…

ಬೆಂಗಳೂರು,ಫೆಬ್ರವರಿ,16,2021(www.justkannada.in): ಟಿವಿ ಫ್ರಿಡ್ಜ್, ಬೈಕ್ ಇರುವವರಿಗೆ ರೇಷನ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಿ ಮತ್ತೆ ಆ ನಿರ್ಧಾರವನ್ನ ವಾಪಸ್ ಪಡೆದ ಆಹಾರ ಸಚಿವ ಉಮೇಶ್ ಕತ್ತಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.jk

ವಿಧಾನಸೌಧದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಚಾರ್ಯ,  ಉಮೇಶ ಕತ್ತಿ, IAS ಲಾಬಿಯೋ ಗೊತ್ತಿಲ್ಲ. ನಮ್ಮದು ಬಡವರ,  ಶೋಷಿತರ ಪರವಾದ ಸರ್ಕಾರ. ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡಬಾರದು. ಮನೋರಂಜನೆಗಾಗಿ,  ದೇಶದ ಪ್ರಸ್ತುತ ವಾತಾವರಣ,  ಧಾರವಾಹಿಗಾಗಿ ಟಿವಿ ಉಪಯೋಗಿಸ್ತಾರೆ. ಟಿವಿ ಪಿಡ್ಜ್ ಬಡವರು ಇಡಬಾರ್ದಾ…? ಎಂದು ಹೇಳಿದರು.TV-fridge- poor –MLA- MP Renukacharya- Tong - Minister Umesh katti

ಉಮೇಶ್ ಕತ್ತಿ ಅರ್ಥ ಮಾಡ್ಕೋಬೇಕು. ಬಡವರ ಕಾರ್ಡ್ ರದ್ದು ಮಾಡಲು ಬಿಡಲ್ಲ . ಕತ್ತಿ ಹೇಳಿಕೆ ಸರ್ಕಾರದ ಹೇಳಿಕೆ ಅಲ್ಲ. ಬೇಕಿದ್ದರೇ ನಕಲಿ ಕಾರ್ಡ್ ರದ್ದು ಮಾಡಲಿ ಎಂದು ಎಂ.ಪಿ ರೇಣುಕಾಚಾರ್ಯ ಸಲಹೆ ನೀಡಿದರು.

Key words: TV-fridge- poor –MLA- MP Renukacharya- Tong – Minister Umesh katti