ಇಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪತ್ರಿಕಾಗೋಷ್ಠಿ ಹಿನ್ನೆಲೆ:  ಮೈಸೂರು ಪತ್ರಕರ್ತರ ಭವನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮೈಸೂರು,ಆ,4,2019(www.justkannada.in):  ಇಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಪತ್ರಿಕಾ ಗೋಷ್ಠಿ ಹಿನ್ನೆಲೆ ಮೈಸೂರು ಪತ್ರಕರ್ತರ ಭವನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರ  ಪತ್ರಿಕಾಗೋಷ್ಟಿ ಅಡ್ಡಿಪಡಿಸಲು ಕೆಲ ಜೆಡಿಎಸ್ ಕಾರ್ಯಕರ್ತರು ಮುಂದಾದ ಹಿನ್ನೆಲೆ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ ಟೇಬಲ್, ಓರ್ವ ಪಿಎಸ್ ಐ, ರಿಸರ್ವ್ ಪೊಲೀಶಸ್ ನಿಯೋಜನೆ ಮಾಡಲಾಗಿದೆ.

10.30ಕ್ಕೆ ಪತ್ರಿಕಾಗೋಷ್ಠಿ ಆರಂಭವಾಗಲಿದ್ದು ಪ್ರಸ್ತುತ ರಾಜಕೀಯ ವಿದ್ಯಮಾನ, ರಾಜಕೀಯ ನಿರ್ಧಾರಕ್ಕೆ ಕಾರಣಗಳನ್ನ ಹೆಚ್.ವಿಶ್ವನಾಥ್ ಬಹಿರಂಗಪಡಿಸಲಿದ್ದಾರೆ.

Key words: Today – unqualified MLA-H.Vishwanath-press conference-tight security-mysore