ಕಚೇರಿಯಲ್ಲೇ ತಾ.ಪಂ. ನೋಡಲ್ ಅಧಿಕಾರಿ ಆತ್ಮಹತ್ಯೆಗೆ ಶರಣು.

ಧಾರವಾಡ,ಜುಲೈ,15,2023(www.justkannada.in): ಕಚೇರಿಯಲ್ಲೇ ತಾಲೂಕು ಪಂಚಾಯಿತಿ ನೋಡಲ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆ ನವಲಗುಂದ ತಾ.ಪಂ. ಕಚೇರಿಯಲ್ಲಿ ಈ ಘಟನೆ ನಡೆದಿದೆ. ನೋಡಲ್ ಅಧಿಕಾರಿ ಸಕ್ರೆಪ್ಪ ಚಿಕ್ಕೋಡಿ(40) ಆತ್ಮಹತ್ಯೆಗೆ ಶರಣಾಗಿದ್ದಾರೆ. ನೋಡಲ್​ ಅಧಿಕಾರಿ ಸಕ್ರೆಪ್ಪ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: taluk panchayth-Nodal officer- commits- suicide.