ಭಾನುವಾರ ನೀಟ್ ಪರೀಕ್ಷೆ:  ಮಕ್ಕಳ ಭವಿಷ್ಯ ಮುಖ್ಯವಾದ್ರೆ ರೋಡ್ ಶೋ ನಿಲ್ಲಿಸಲಿ- ಬಿಜೆಪಿಗೆ ಹೆಚ್.ಡಿಕೆ ಆಗ್ರಹ..

ಬೆಂಗಳೂರು,ಮೇ,5,2023(www.justkannada.in):   ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಮತ್ತು ಭಾನುವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಮ್ಮಿಕೊಂಡಿದ್ದು ಭಾನುವಾರವೇ ನೀಟ್ ಪರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಭಾನುವಾರ ನೀಟ್ ಪರೀಕ್ಷೆ ಇದೆ. ಹೀಗಾಗಿ ಬಿಜೆಪಿಯವರು ರೋಡ್ ಶೋ ನಿಲ್ಲಿಸಲಿ. ಮಕ್ಕಳ ಭವಿಷ್ಯ ಮುಖ್ಯವಾದರೆ ರೋಡ್ ಶೋ ನಿಲ್ಲಿಸಲಿ. ಬಿಜೆಪಿಗೆ  ಸಮಸ್ಯೆಗಿಂತ ಅಧಿಕಾರ ಹಿಡಿಯುವುದೇ ಮುಖ್ಯ . ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದರೆ ರೋಡ್ ಶೋ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

Key words: Stop -road show – future -children – important – HD kumaraswamy