ಗ್ಯಾರಂಟಿ ಬಂದ್ ಗೆ ಹುನ್ನಾರ: ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಬಂದಿಲ್ಲ- ಶ್ರೀರಾಮುಲು

 ಬೆಂಗಳೂರು,ಜೂನ್,12,2026 (www.justkannada.in):  ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಶ್ರೀರಾಮುಲು, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇದು ಗ್ಯಾರಂಟಿ ಯೋಜನೆಗಳನ್ನ ಬಂದ್ ಮಾಡುವ ಹುನ್ನಾರ. ಒಂದು ಕಡೆ ಏನು ಹೇಳಬೇಕು ಅಂತಾ ಡಿಕೆ ಶಿವಕುಮಾರ್ ಗೆ ಗೊತ್ತಾಗುತ್ತಿಲ್ಲ.  ಸಿದ್ದರಾಮಯ್ಯ ಆಡಳಿತ ಸರಿ ಇರಲಿಲ್ಲ ಎಂದು ಹೇಳಲು ಹೊರಟಿದ್ದಾರಾ?  ಸಿದ್ದರಾಮಯ್ಯನವರ ಯೋಜಿನೆಗಳನ್ನ ನಿಲ್ಲಿಸಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು..

ಎಲ್ಲರಿಗೂ ಉಚಿತ ಅಂತಾ ಅಧಿಕಾರಕ್ಕೆ ಬಂದು ಈಗ ಪರಿಷ್ಕರಣೆ ಮಾಡಲು ಮುಂದಾಗಿದ್ದಾರೆ.  ಗೃಹಲಕ್ಷ್ಮಿ ಯೋಜನೆಯ   5 ಸಾವಿರ ಕೋಟಿರ ರೂ. ಹಣ ಬಂದಿಲ್ಲ ಎಂದು ಶ್ರೀರಾಮುಲು ಚಾಟಿ ಬೀಸಿದರು.

Key words: guarantee, bandh, Congress, Government, Sriramulu