ರಾಮೇಶ್ವರಂ  ಕೆಫೆ ಬಾಂಬ್ ಸ್ಪೋಟ ಪ್ರಕರಣ: ಅನುಮಾನಸ್ಪದ 17 ಜನರನ್ನ ವಿಚಾರಣೆ  ನಡೆಸಿದ ಎನ್ ಐಎ.

ಬಳ್ಳಾರಿ,ಮಾರ್ಚ್,9,2024(www.justkannada.in): ರಾಮೇಶ್ವರಂ  ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ ಐಎ ತಂಡ ಇದೀಗ  ಅನುಮಾನಸ್ಪದ 17 ಜನರನ್ನ ವಿಚಾರಣೆಗೊಳಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡ ಬಳ್ಳಾರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಸೈಯದ್ ಸಮೀರ್ ಸಹಚರರು,  ಸುಲೇಮಾನ್ ಟೀಂ,  ಮುನೀರ್ ಸಹಚರರನ್ನ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಇದೀಗ NIA ಅಧಿಕಾರಿಗಳ ತಂಡವು ಬಳ್ಳಾರಿಯಿಂದ ಕಲಬುರ್ಗಿಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Rameswaram Café-Bomb -Blast –Case- NIA- 17 suspects