ಕಿರುತೆರೆ ನಟನ ಮೇಲೆ ಹಲ್ಲೆ: ಪ್ರಕರಣ ದಾಖಲು.

ಬೆಂಗಳೂರು,ಮಾರ್ಚ್,9,2024(www.justkannada.in): ಕಸದ ವಿಚಾರಕ್ಕೆ ಕಿರುತೆರೆ ನಟನ ಮೇಲೆ ವ್ಯಕ್ತಿಯೊರ್ವ ಹಲ್ಲೆ ನಡೆಸಿರುವ  ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಕಿರುತೆರೆ ನಟ ಚರಿತ್ ಬಾಳಪ್ಪ ಹಲ್ಲೆಗೊಳಗಾದವರು.  ಖಾಲಿ ಜಾಗದಲ್ಲಿ ಕಸವಿಟ್ಟಿದ್ದಕ್ಕೆ ಕಿರುತೆರೆ ನಟ ಚರಿತ್ ಬಾಳಪ್ಪ ಮೇಲೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಫೆ,23 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶೂಟಿಂಗ್ ಗೆ ಹೋಗುವಾಗ ನಟ ಚರಿತ್ ಬಾಳಪ್ಪ ಖಾಲಿ ಜಾಗದಲ್ಲಿ ಕಸ ಇಟ್ಟಿದ್ದಾರೆ ಎನ್ನಲಾಗಿದ್ದು, ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಚರಿತ್ ಬಾಳಪ್ಪ ಮೇಲೆ ಹಲ್ಲೆಯಾಗಿದೆ ಎನ್ನಲಾಗಿದೆ.  ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Assault –actor-Case –registered-bangalore