ಬೆಂಗಳೂರು,ಜೂನ್,13,2026 (www.justkannada.in): ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಸುರೇಶ್, ಸಿದ್ದರಾಮಯ್ಯ ರಾಜ್ಯ ರಾಷ್ಟ್ರಕ್ಕೆ ಹೊಸ ಸಂದೇಶ ಕೊಟ್ಟಿದ್ದಾರೆ. ಇಡೀ ರಾಷ್ಟ್ರಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ನಾಯಕ ಸಿದ್ದರಾಮಯ್ಯ. ಪಕ್ಷದ ಪರವಾಗಿ ಸಿದ್ದರಾಮಯ್ಯನವರಿಗೆ ಗೌರವ ಸಮರ್ಪಿಸಬೇಕು ಎಂದಿದ್ದಾರೆ.
ಹಾಗೆಯೇ ನೂತನ ಸಿಎಂ ಡಿಕೆ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸಬೇಕು ಗೌರವ ಸಮರ್ಪಿಸುವುದರ ಜೊತೆಗ ಜವಾಬ್ದಾರಿ ವಹಿಸಬೇಕು. 2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಪಕ್ಷ ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕು. ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್, ಹರಿಪ್ರಸಾದ್ ಮೂವರು ಮುಖ್ಯ ಎಂದರು.
Key words: Former MP, D.K. Suresh, praised, Siddaramaiah






