ಯೋಗರಾಜ್ ಭಟ್ಟರ ‘ಗರಡಿ’ಯಿಂದ ಹೊರ ನಡೆದ ರಚಿತಾ ರಾಮ್

ಬೆಂಗಳೂರು, ಫೆಬ್ರವರಿ 10, 2022 (www.justkannada.in): ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ಯಶಸ್ ಸೂರ್ಯಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಬೇಕಿತ್ತು.

ಆದರೆ ಕಾಲ್ ಶೀಟ್ ಸಮಸ್ಯೆಯಿಂದಾಗಿ ರಚಿತಾ ರಾಮ್ ಗರಡಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಸಿ ಪಾಟೀಲ್ ನಿರ್ಮಾಣದ ಗರಡಿ ಸಿನಿಮಾಗೆ ಸದ್ಯ ಸೋನಾಲ್ ಮಾಂಟೇರಿಯೋ ನಾಯಕಿಯಾಗಿ ನಟಿಸಲಿದ್ದಾರೆ.