Friday, August 7, 2026

BDA Apartments

Home Front Page ಸಿದ್ದರಾಮಯ್ಯ ಸಾಲದ ಚಾಂಪಿಯನ್- ಆರ್.ಅಶೋಕ್ ವಾಗ್ದಾಳಿ

ಸಿದ್ದರಾಮಯ್ಯ ಸಾಲದ ಚಾಂಪಿಯನ್- ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು,ಮಾರ್ಚ್,5,2025 (www.justkannada.in): ಸಿಎಂ ಸಿದ್ದರಾಮಯ್ಯ 1ಸಾವಿರ ಕೋಟಿ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ ಸಾಲದ ಚಾಂಪಿಯನ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ ಸರ್ಕಾರ ದಲಿತರ ಹಣ ಲೂಟಿ ಮಾಡಿದೆ. ಗ್ಯಾರಂಟಿಗಾಗಿ ದಲಿತರ ಹಣ ಬಳಸಲಾಗಿದೆ. ನಾನು ಸಿದ್ದಣ್ಣ ಲೂಟಿ ಗ್ಯಾರಂಟಿಯ ಅಣ್ಣ ಎಂಬಂತಾಗಿದೆ.  ಭಿಕ್ಷೆ ಬೇಡೋ  ಸ್ಥಿತಿಗೆ ಸಿಎಂ ಸಿದ್ದರಾಮಯ್ಯ ಬಂದಿದ್ದಾರೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ 1ಸಾವಿರ ಕೋಟಿ ಸಾಲ ಮಾಡಿದ್ದು, ಈ ಹಿಂದೆ ಯಾರೂ ಇಷ್ಟು ಸಾಲ ಮಾಡಿಲ್ಲ. ಅದಕ್ಕೆ ಸಿದ್ದರಾಮಯ್ಯರನ್ನ ಲೂಟಿರಾಮಯ್ಯ ಅನ್ನೋದು  ಎಂದು ಆರ್.ಅಶೋಕ್ ಕಿಡಿಕಾರಿದರು.

Key words: Siddaramaiah, champion of debt, R. Ashok