Friday, August 7, 2026

BDA Apartments

Home Front Page ಚುನಾವಣಾ ವಿಚಾರ ಸಿಎಂ ಕಚೇರಿಯಲ್ಲಿ ಚರ್ಚಿಸಿದ್ದು ತಪ್ಪು – ಆರ್.ಅಶೋಕ್

ಚುನಾವಣಾ ವಿಚಾರ ಸಿಎಂ ಕಚೇರಿಯಲ್ಲಿ ಚರ್ಚಿಸಿದ್ದು ತಪ್ಪು – ಆರ್.ಅಶೋಕ್

ಬೆಂಗಳೂರು,ಮಾರ್ಚ್,18,2026 (www.justkannada.in):  ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಟಿಕೆಟ್   ಕುರಿತ ವಿಚಾರವನ್ನ ಸಿಎಂ ಸಿದ್ದರಾಮಯ್ಯ ಸಿಎಂ ಕಚೇರಿಯಲ್ಲಿ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಚುನಾವಣಾ ವಿಚಾರವನ್ನ ಸಿಎಂ ಕಚೇರಿಯಲ್ಲಿ ಚರ್ಚೆ ಮಾಡಿದ್ದು ತಪ್ಪು. ಸಿಎಂ ಸಿದ್ದರಾಮಯ್ಯಗೆ ಮರೆವು ಜಾಸ್ತಿಯಾದಂತಿದೆ. ಸಿಎಂ ಸಿದ್ದರಾಮಯ್ಯಗೆ ಏನು ಒತ್ತಡ ಇದೆಯೋ ಏನೋ ಎಂದು ವ್ಯಂಗ್ಯವಾಡಿದರು.

ತಮ್ಮ ಪದವಿಯನ್ನು ಸಿಎಂ ಸಿದ್ದರಾಮಯ್ಯ ಅವರೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣೆ ಬಗ್ಗೆ  ಮಾತನಾಡಲು ಪಕ್ಷದ ಕಚೇರಿ ಇದೆ.  ಅಧ್ಯಕ್ಷರಿದ್ದಾರೆ.  ಸಿಎಂ ಕೊಠಡಿಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದು ತಪ್ಪು ಎಂದು ಆರ್. ಅಶೋಕ್ ಕುಟುಕಿದರು.

ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಟಿಕೆಟ್ ಗಾಗಿ ದಿವಂಗತ ಎಚ್.ವೈ ಮೇಟಿ ಅವರ ಮಕ್ಕಳ ನಡುವೆ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂ ಕಚೇರಿಯಲ್ಲಿ ಮೂವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

Key words: discuss, election issue , CM’s office, CM Siddaramaiah, R. Ashok