Tuesday, September 15, 2026

BDA Apartments

ಮೈಸೂರು- ಊಟಿ ಹೆದ್ದಾರಿ ತಡೆದು ಕಬ್ಬು ಬೆಳೆಗಾರರಿಂದ ಪ್ರತಿಭಟನೆ BDA JK_Adv BDA Adv
Home Front Page ಮೈಸೂರು- ಊಟಿ ಹೆದ್ದಾರಿ ತಡೆದು ಕಬ್ಬು ಬೆಳೆಗಾರರಿಂದ ಪ್ರತಿಭಟನೆ..

ಮೈಸೂರು- ಊಟಿ ಹೆದ್ದಾರಿ ತಡೆದು ಕಬ್ಬು ಬೆಳೆಗಾರರಿಂದ ಪ್ರತಿಭಟನೆ..

ಮೈಸೂರು,ಅಕ್ಟೋಬರ್,27,2022(www.justkannada.in):  ಕಬ್ಬಿನ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಕಬ್ಬುಬೆಳೆಗಾರರು ಧರಣಿ ಕೈಗೊಂಡಿದ್ದು, ಮೈಸೂರು- ಊಟಿ ಹೆದ್ದಾರಿ ತಡೆದು ರೈತಮುಖಂಡರು ಪ್ರತಿಭಟನೆ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  ಎಪಿಎಂಸಿ ಸಮೀಪದ ನಂಜನಗೂಡು ರಿಂಗ್ ರಸ್ತೆಯಲ್ಲಿ  ಕಬ್ಬುಬೆಳೆಗಾರರು ಧರಣಿ ನಡೆಸಿದ್ದು, ಕಬ್ಬಿನ ಸೋಗು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಪ್ರತಿಭಟನಾಕಾರರು ಧರಣಿಯಲ್ಲಿ ಭಾಗಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್,  ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿತ್ತು. ಈ ಮೂಲಕ ವಾಹನ ದಟ್ಟಣೆ ಆಗದಂತೆ ಪೊಲೀಸರು ಕ್ರಮವಹಿಸಿದ್ದರು.ಮೈಸೂರು farmer farmer 1

ಪ್ರತಿಭಟನಾಕಾರರು ರಸ್ತೆಯಲ್ಲಿ ಉರುಳಿಸೇವೆ ಮಾಡಿ ಪ್ರತಿಭಟನೆ ನಡೆಸಿದ್ದು, ನಾಲ್ಕು ದಿಕ್ಕಿನಲ್ಲೂ ರೈತಮುಖಂಡರು ಜಮಾವಣೆಯಾದ ಹಿನ್ನೆಲೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಬದಲಿ ಮಾರ್ಗದಲ್ಲಿ ತೆರಳುತ್ತಿದ್ದು, ಸದ್ಯ ಮೈಸೂರು -ನಂಜನಗೂಡು ರಸ್ತೆ ಬಂದ್ ಮಾಡಲಾಗಿತ್ತು.

Key words: Protest – sugarcane- growers -blocking – Mysore-Ooty- highway.