ಪೆನ್ ಡ್ರೈವ್ ಪಾಲಿಟಿಕ್ಸ್: ರಾಜ್ಯ ಸರ್ಕಾರಕ್ಕೆ ಮತ್ತೆ ಸವಾಲು ಹಾಕಿದ ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಜುಲೈ,6,2023(www.justkannada.in): ರಾಜ್ಯ ಸರ್ಕಾರದ ವಿರುದ್ದ ವರ್ಗಾವ ದಂಧೆ ಆರೋಪ ಮಾಡಿ ಪೆನ್ ಡ್ರೈವ್ ನಲ್ಲಿ ಸಾಕ್ಷಿ ಇದೆ ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಮತ್ತೆ ಸವಾಲು ಹಾಕಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಹೆದರಿ ಓಡಿ ಹೋಗಲ್ಲ ಹಿಟ್ ಅಂಡ್ ರನ್ ಮಾಡಲ್ಲ. ಕಾಂಗ್ರೆಸ್ ನಾಯಕರು ಏನು ಮಾತನಾಡುತ್ತಾರೋ ನೋಡೋಣ ಪೆನ್ ಡ್ರೈವ್ ಅಸಲಿ. ಪೆನ್ ಡ್ರೈವ್ ನಲ್ಲಿರೋದು ಎಲ್ಲವೂ ಒರಿಜಿನಲ್ ಆಗಿದೆ . ಈ ಪೆನ್ ಡ್ರೈವ್   ಹೈದರಬಾದ್ ನಲ್ಲಿ ಮಾಡಿಸಿದ್ದಲ್ಲ . ಪ್ರಕರಣದಲ್ಲಿ ಭಾಗಿಯಾದವರ ಮೇಳೆ ಕ್ರಮ ಏನು ಎಂದು ಹೇಳಬೇಕಲ್ವಾ..? ಎಂದು ಪ್ರಶ್ನಿಸಿದರು.

ನಾನು ದಾಖಲೆ ತೋರಿಸಿದರೇ ಕ್ರಮ ಕೈಗೊಳ್ತೀರಾ..?  ದಾಖಲೆ ಕೊಡ್ತೀನಿ ಕ್ರಮ ಕೈಗೊಳ್ಳಲು ನಿಮಗೆ ತಾಕತ್ ಇದೆಯಾ. ಈ ರಾಜ್ಯದ ಸಿಎಂ ಅಕ್ರಮಗಳಿಗೆ ಕಡಿವಾಣ ಹಾಕ್ತಾರಾ. ವರ್ಗವಣೆ ದಂಧೆ ನಿಲ್ಲಿಸುವ ಶಕ್ತಿ ಇದೆಯಾ…? ದಾಖಲೆ ಕೊಡ್ತೀನಿ ಆರೋಪಿಗಳು ಅರೆಸ್ಟ್ ಆಗಬೇಕು ಎಂದು ಸವಾಲು ಹಾಕಿದರು.

Key words:  Pen Drive- Politics- Former CM -H.D Kumaraswamy- state government -again.