ರಾಜ್ಯದ ಪರ ಧ್ವನಿ ಎತ್ತುವ ಶಕ್ತಿ ಇರೋದು ಜೆಡಿಎಸ್ ಗೆ ಮಾತ್ರ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಜುಲೈ,,19,2023(www.justkannada.in): ರಾಜ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿವೆ. ರಾಜ್ಯದ ಪರ ಧ್ವನಿ ಎತ್ತುವ ಶಕ್ತಿ ಇರೋದು ಜೆಡಿಎಸ್ ಗೆ ಮಾತ್ರ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆ ವಿಚಾರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪದೇ ಪದೇ ಈ ವಿಚಾರವನ್ನ ಎಳೆಯಬೇಕಿಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿವೆ. ಎನ್ ಡಿಎ ಮತ್ತು  INDIA ಜೊತೆ ಹೊಂದಾಣಿಕೆ ಇಲ್ಲ ಎಂದು ತಿಳಿಸಿದ್ದಾರೆ.

Key words: Only- JDS – power – voice – state – former CM -HD Kumaraswamy.