ನಿಖಿಲ್ ಕಲ್ಯಾಣಕ್ಕೆ ರಾಮನಗರದಲ್ಲಿ ಅದ್ಧೂರಿ ಸೆಟ್ ನಿರ್ಮಾಣ ಕಾರ್ಯಕ್ಕೆ ಚಾಲನೆ

ಬೆಂಗಳೂರು, ಫೆಬ್ರವರಿ 24, 2020 (www.justkannada.in): ಏಪ್ರಿಲ್ ​​ 17 ರಂದು ನಿಖಿಲ್ ಕುಮಾರಸ್ವಾಮಿ – ರೇವತಿ ಮದುವೆಗೆ ದಿನಾಂಕ ನಿಗದಿಯಾಗಿದೆ.

ಅದ್ಧೂರಿ ಮದುವೆಗೆ ರಾಮನಗರದ ಜನಪದ ಲೋಕದ ಹಿಂಭಾಗದಲ್ಲಿ 54 ಎಕರೆ ಜಾಗದಲ್ಲಿ ಕಲ್ಯಾಣಮಂಟಪದ ಅದ್ದೂರಿ ಸೆಟ್ ‌ ಹಾಕಲಾಗುತ್ತಿದೆ. ಶಿವರಾತ್ರಿ ಹಬ್ಬದ ದಿನ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ . ಎಚ್ಡಿಕೆ ಕುಟುಂಬ ವಿಶೇಷ ಪೂಜೆ ನೆರವೇರಿಸಿದ್ದಾರೆ .

ವಾಸ್ತುಪ್ರಕಾರ ಕಲ್ಯಾಣ ಮಂಟಪದ ಅದ್ದೂರಿ ಸೆಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದ್ದು , ಖ್ಯಾತ ವಾಸ್ತುತಜ್ಞರು , ಜ್ಯೋತಿಷಿಗಳು , ಶಾಸ್ತ್ರಿಗಳಿಂದ ವಿಶೇಷ ಪೂಜೆ ಮಾಡಲಾಯಿತು . ಇದೇ ಏಪ್ರಿಲ್ 17 ಕ್ಕೆ ನಿಗದಿಯಾಗಿರುವ ನಿಖಿಲ್ – ರೇವತಿ ವಿವಾಹ ನಿಗದಿಯಾಗಿದೆ .

ಮಾಜಿ ಪ್ರಧಾನಿ ಹೆಚ್ ​. ಡಿ ದೇವೇಗೌಡರ ಮೊಮ್ಮಗ , ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ​​ ಕುಮಾರಸ್ವಾಮಿ ಕಲ್ಯಾಣೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗಲಿದ್ದಾರೆ .