ನಷ್ಟದ ವರದಿ ಸಿದ್ಧಪಡಿಸಿದ ಸರ್ಕಾರ: ಎನ್ ಡಿಆರ್ ಎಫ್ ಅಡಿ ತಕ್ಷಣ ಪರಿಹಾರಕ್ಕಾಗಿ ಮನವಿ…

ಬೆಂಗಳೂರು,ಆ,10,2020(www.justkannada.in):  ರಾಜ್ಯದಲ್ಲಿ ಸುರಿದ ಮಹಾಮಳೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು ಈ ಹಿನ್ನೆಲೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ನಷ್ಟದ ವರದಿ ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.jk-logo-justkannada-logo

ಕೊಡಗಿನಲ್ಲಿ ಮಹಾಮಳೆಯಿಂದಾಗಿ 2 ಸಾವಿರ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಹಾಗೆಯೇ ಚಿಕ್ಕಮಗಳೂರಿನಲ್ಲಿ 1 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಸರ್ಕಾರ ಅಂದಾಜಿಸಿದ್ದು ಎನ್ ಡಿಆರ್ ಎಫ್ ಅಡಿ ತಕ್ಷಣ ಪರಿಹಾರ ಬಿಡುಗಡೆ  ಮಾಡಲು ಮನವಿ ಮಾಡಿದೆ. ಮೊದಲ ಕಂತಿನ ಹಣ ಪಾವತಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕಲಿದೆ.government-rain-loss-report-ndrf-immediate-relief

ಇನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಈ ವೇಳೆ ಮಳೆಯಿಂದಾಗಿ ಆಗಿರುವ ಹಾನಿ ಬಗ್ಗೆ ಪ್ರಧಾನಿ ಮೋದಿಯ ಮುಂದೆ ರಾಜ್ಯ ಸಚಿವರು ಪ್ರಸ್ತಾಪಿಸಿ ಪರಿಹಾರಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

Key words: Government – rain-loss- report-NDRF – immediate -relief.