ಅತ್ತ ವೈದ್ಯರು ಆಸ್ಪತ್ರೆಗೆ: ಇತ್ತ ಸಿಇಓ ಪರ ಬೀದಿಗಿಳಿಯಲು ಪಿಡಿಓಗಳು ಸಜ್ಜು…

ಮೈಸೂರು,ಆ,24,2020(www.justkannada.in): ಮೇಲಾಧಿಕಾರಿ ವಿರುದ್ದ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಗ್ಯಾಧಿಕಾರಿ ನಾಗೇಂದ್ರ ಪರ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರು ಇದೀಗ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನಡುವೆ ಇದೀಗ ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಪರ ಬೀದಿಗಿಳಿಯಲು ಪಿಡಿಒಗಳು ಸಜ್ಜಾಗಿದ್ದಾರೆ.jk-logo-justkannada-logo

ಟಿಹೆಚ್ ಓ ನಾಗೇಂದ್ರ ಆತ್ಮಹತ್ಯೆವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ಅಮಾನತು ಮಾಡುವಂತೆ ಆಗ್ರಹಿಸಿ  ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸಿದ್ದರು. ನಂತರ ಸರ್ಕಾರ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ವರ್ಗಾವಣೆ ಮಾಡಿತ್ತು.nanjanagud THO- case-Doctors- PDO-CEO -protest

ಇದಾದ ಬಳಿಕ ವೈದ್ಯರು ಮುಷ್ಕರ ಕೈಬಿಟ್ಟು ಇಂದಿನಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ಇತ್ತಕಡೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಪರ ಬೀದಿಗಿಳಿಯಲು ಸಜ್ಜಾಗಿರುವ ಪಿಡಿಒಗಳು, ಪಿ.ಕೆ.ಮಿಶ್ರಾ ಅವರ ವರ್ಗಾವಣೆ ತಡೆ ಹಿಡಿಯುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡಲಿದ್ದಾರೆ. ಈ ಮಧ್ಯೆ ಕೋವಿಡ್ ಹಿನ್ನೆಲೆ ಪಿಡಿಓಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲು ಪೋಲೀಸರು ನಿರಾಕರಿಸಿದ್ದು ಹೀಗಾಗಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ.

Key words: nanjanagud THO- case-Doctors- PDO-CEO -protest