Saturday, August 22, 2026

BDA Apartments

Home Front Page ಕುಡಿಯುವ ನೀರಿಲ್ಲದೆ ಪರದಾಟ: ಗ್ರಾಮಸ್ಥರಿಂದ ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…

ಕುಡಿಯುವ ನೀರಿಲ್ಲದೆ ಪರದಾಟ: ಗ್ರಾಮಸ್ಥರಿಂದ ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…

ಮೈಸೂರು,ಜೂ,10,2019(www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮಸ್ಥರು ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದು ಇಂದು ಗ್ರಾಮಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ದೇವನೂರು ಗ್ರಾಮ ಪಂಚಾಯಿತಿಗೆ  ಚುಂಚನಹಳ್ಳಿ ಗ್ರಾಮಸ್ಥರು ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಚುಂಚನಹಳ್ಳಿ ಗ್ರಾಮ ಸುಮಾರು ಮೂರು ಸಾವಿರ ಜನಸಂಖ್ಯೆ  ಹೊಂದಿದ್ದು ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಚುಂಚನಹಳ್ಳಿ ಗ್ರಾಮಸ್ಥರು ಮನವಿ ಮಾಡಿದರೂ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿಲ್ಲ.

ಚುಂಚನಹಳ್ಳಿಯಲ್ಲಿ ನೀರು ಸರಬರಾಜು ಘಟಕವಿದ್ದರೂ ಕಬಿನಿ ನೀರು  ಬರಲ್ಲ. ಹೀಗಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ದೇವನೂರು ಗ್ರಾಮ ಪಂಚಾಯಿತಿ  ಮುಂದೆ ಬಿಂದಿಗೆ ಹಿಡಿದು ಚುಂಚನಹಳ್ಳಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಭಾರಿ ಪ್ರತಿಭಟನೆ ನಡೆಸಿದರು.   ವಿಷಯ ತಿಳಿದ ತಕ್ಷಣ ಜಿ. ಪಂ ಸದಸ್ಯ ಬಿ. ಎನ್, ಸದಾನಂದ, ಮತ್ತು ನಂಜನಗೂಡು ತಾ. ಪಂ ಇ ಒ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಅಧಿಕಾರಿಗಳನ್ನು ಚುಂಚನಹಳ್ಳಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

Key words: mysore- drinking water-Protest -villagers -grampanchayath