ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ

ವಿಜಯಪುರ,ಮೇ, 29,2026 (www.justkannada.in):  ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ.  ಗಲಾಟೆಯಾಗಿ 6 ಮಂದಿಯನ್ನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೇವಣ್ಣ ಸಿದ್ದಪ್ಪ ನಿರಾಳೆ,  ದುಂಡಪ್ಪ ರೇವಣ್ಣ ಸಿದ್ದಪ್ಪ ನಿರಾಳೆ,  ಶಿವಪುತ್ರ  ನಿರಾಳೆ, ಚಂದ್ರ ಶೇಖರ್ ನಿರಾಳೆ ಶಬ್ಬೀರ್ ನದಾಫ್  ಸೇರಿದಂತೆ 6 ಜನರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ನಿರಾಳೆ ಮತ್ತು ಗೊಳಗಿ ಕುಟುಂಬದ ನಡುವೆ ಆಸ್ತಿ ವಿವಾದ ಉಂಟಾಗಿದ್ದು  ಈ ವೇಳೆ ನಿರಾಳೆ ಕುಟುಂಬದ ಮೇಲೆ ಗೊಳಗಿ ಕುಟುಂಬ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

Key words: Vijayapur,  Six people , Murder, property dispute