ಶಾಸಕರು, ಸಚಿವರು ನಿಲ್ಲಬೇಕೆಂದೇನಿಲ್ಲ: ಕಾರ್ಯಕರ್ತ ನಿಂತರೂ ಗೆಲ್ಲುವ ಸಾಧ್ಯತೆ- ಸಚಿವ ಬಿ. ನಾಗೇಂದ್ರ.

ರಾಯಚೂರು,ಮಾರ್ಚ್,12,2024(www.justkannada.in): ಲೋಕಸಭೆ ಚುನಾವಣೆಗೆ ಶಾಸಕರು, ಸಚಿವರು ನಿಲ್ಲಬೇಕೆಂದೇನಿಲ್ಲ. ಕಟ್ಟ ಕಡೆಯ ಕಾರ್ಯಕರ್ತ ನಿಂತರೂ ಗೆಲ್ಲುವ ಸಾಧ್ಯತೆ ಇದೆ ಎಂದು ಕ್ರೀಡಾ ಸಚಿವ ಬಿ. ನಾಗೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಿ.ನಾಗೇಂದ್ರ, ಗ್ಯಾರಂಟಿ ಯೋಜನೆ ಜನರ ಮಧ್ಯೆ ಓಡಾಡುತ್ತಿದೆ. ಜನರು ನೆಮ್ಮದಿಯಿಂದಿದ್ದಾರೆ . ಜನರ ಮಧ್ಯೆ ನಮ್ಮ ಸರ್ಕಾರವಿದೆ ಎಂದರು.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನನ್ನ ಸಹೋದರ ಕೂಡ  ಟಿಕೆಟ್ ಆಕಾಂಕ್ಷಿ.  ಯಾರಿಗೆ ಟಿಕೆಟ್ ಕೊಟ್ಟರೂ ಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಶಾಸಕರು ಸಚಿವರು ನಿಲ್ಲಬೇಕು ಎಂದೇನಿಲ್ಲ  ಎಂದು ಸಚಿವ ಬಿ. ನಾಗೇಂದ್ರ ನುಡಿದರು.

Key words: MLAs – ministers –Lokasabha-election – Minister -B. Nagendra.