Tuesday, August 11, 2026

BDA Apartments

Home Front Page ಮೈಸೂರಿನಲ್ಲಿ ಹನುಮಾನ್ ಚಾಲೀಸ ಪಾರಾಯಣ ಆಧ್ಯಾತ್ಮಿಕ ಸಂಚಲನ ಸೃಷ್ಟಿಸಲಿದೆ- ಶಾಸಕ ಟಿಎಸ್. ಶ್ರೀವತ್ಸ

ಮೈಸೂರಿನಲ್ಲಿ ಹನುಮಾನ್ ಚಾಲೀಸ ಪಾರಾಯಣ ಆಧ್ಯಾತ್ಮಿಕ ಸಂಚಲನ ಸೃಷ್ಟಿಸಲಿದೆ- ಶಾಸಕ ಟಿಎಸ್. ಶ್ರೀವತ್ಸ

ಮೈಸೂರು,ಫೆಬ್ರವರಿ,10,2026 (www.justkannada.in): ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 14ರಂದು ನಡೆಯಲಿರಯವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದಲ್ಲಿ ಮೈಸೂರಿಗರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮನ ಸ್ಮರಣೆ ಮಾಡಿ ಹಿಂದೂ ಸಮಾಜದ ರಕ್ಷಣೆಗೆ ಕೈಜೋಡಿಸಬೇಕೆಂದು ಶಾಸಕ ಟಿಎಸ್. ಶ್ರೀವತ್ಸ ರವರು ಕರೆ ನೀಡಿದರು.

ಗಣಪತಿ ಸಚ್ಚಿದಾನಂದ ಆಶ್ರಮದಿಂದ ಹೊರಟ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಟಿಎಸ್. ಶ್ರೀವತ್ಸ, ಮೈಸೂರಿನ ಸರ್ವಜನಾಂಗದವರು ವಿವಿಧ ಬಡಾವಣೆಗಳು ಸೇರಿದಂತೆ ಗ್ರಾಮಂತರ ಪ್ರದೇಶ ಹಳ್ಳಿಹಳ್ಳಿಯಿಂದ ಹನುಮಾನ್ ಚಾಲೀಸ ಪಾರಾಯಣದಲ್ಲಿ ಭಾಗವಹಿಸಲು ಉತ್ಸುಕರಾಗುತ್ತಿದ್ದಾರೆ ಖುಷಿಯಿಂದ ಸಂಘಟಿತರಾಗುತ್ತಿದ್ದಾರೆ ಎಂದರೆ ಹಿಂದೂ ಸಮಾಜದ ರಕ್ಷಣೆಗೆ  ಗಣಪತಿಸಚ್ಚಿದಾನಂದ ಸ್ವಾಮೀಜಿ ಯವರ ಹನುಮಾನ ಚಾಲೀಸ ಕಾರ್ಯಕ್ರಮ ಪ್ರೇರಣೆಯಾಗಿದೆ ಎಂದರು.

ಈ ವೇಳೆ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ಸುಬ್ಬಯ್ಯ, ಬಿಜೆಪಿ ಮುಖಂಡ ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಪ್ರದೀಪ್ ಕುಮಾರ್, ಪ್ರಜೇಶ್ ಕುಮಾರ್, ಗೋಲ್ಡ್ ಸುರೇಶ್, ಆಶ್ರಮದ ರಮೇಶ್, ಇನ್ನಿತರರು ಉಪಸ್ಥಿತರಿದ್ದರು.

Key words: Hanuman Chalisa recitation , Mysore, MLA, TS. Srivatsa