ಬೆಂಗಳೂರು,ಜುಲೈ,1,2026 (www.justkannada.in): ಗ್ಯಾರಂಟಿ ಯೋಜನೆಗಳು ದುರ್ಬಳಕೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಮರುಪರಿಶೀಲನೆಗೆ ಮುಂದಾಗಿರುವ ಕುರಿತು ಮಾಜಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಮಧು ಬಂಗಾರಪ್ಪ, ಬೇರೆ ರಾಜ್ಯದವರು ಗ್ಯಾರಂಟಿ ಯೋಜನೆ ಪ್ರಯೋಜನ ಪಡೆದರೇ ಸರೀನಾ? ಕಾರ್ಯಕ್ರಮ ಕೊಟ್ಟಾಗ ಕೆಲವು ಸಲ ತಪ್ಪು ಆಗುತ್ತೆ. ನಮ್ಮ ಜಿಲ್ಲೆಯಲ್ಲೇ ತಪ್ಪಾಗಿ ವೃದ್ದಾಪ್ಯ ವೇತನ ಹೋಗುತ್ತಿದೆ. ಇದೆಲ್ಲವೂ ಒಂದು ಸಲ ಕ್ಲೀನ್ ಅಪ್ ಮಾಡಿದರೇ ಒಳ್ಳೆಯದು ಎಂದರು.
ಎಸ್ ಐಆರ್ ಸಮಯದಲ್ಲೇ ಗ್ಯಾರಂಟಿಗಳ ಪರಿಶೀಲನೆ ಯಾಕೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ. ಇದು ಬಿಜೆಪಿಯವರ ಹುನ್ನಾರ ಎಂದರು.
Key words: Misuse, guarantee scheme, cleaned up, Madhu Bangarappa






