ಮೈಸೂರು ದಸರಾ ನೋಡಲು ಬಂದ ವ್ಯಕ್ತಿ ನೇಣಿಗೆ ಶರಣು.

ಮೈಸೂರು,ಅಕ್ಟೋಬರ್,20,2021(www.justkannada.in): ದಸರಾ ನೋಡಲು ಮೈಸೂರಿಗೆ ಆಗಮಿಸಿದ ವ್ಯಕ್ತಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಕೆ.ಆರ್.ಪೇಟೆ ತಾಲೂಕಿನ ಶಿವರಾಜ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೈಸೂರಿನ ವಸತಿಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂಗಂ ಚಿತ್ರಮಂದಿರದ ಬಳಿ ಇರುವ ವಸತಿಗೃಹದಲ್ಲಿ ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ ಶಿವರಾಜ್. ಅಕ್ಟೋಬರ್ 12 ರಂದು ಕೊಠಡಿ ಬಾಡಿಗೆ ಪಡೆದಿದ್ದಾನೆ. ದಸರಾ ನೋಡಲು ಬಂದ ಶಿವರಾಜ್ ಜಂಬೂಸವಾರಿಗೆ ಮುನ್ನವೇ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಎರಡು ದಿನಗಳು ಕೊಠಡಿ ಬಾಗಿಲು ತೆರೆಯದ ಕಾರಣ ಪರಿಶೀಲನೆ ನಡೆಸಿದ ವಸತಿಗೃಹದ ಸಿಬ್ಬಂದಿಗಳಿಗೆ ನೇಣಿಗೆ ಶರಣಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: man –succiude- Mysore- Dasara