Thursday, August 13, 2026

BDA Apartments

Home Front Page ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮೈಸೂರು,ನವೆಂಬರ್,16,2020(www.justkannada.in) ; ನಾಯಿ ತಿಂದು ನೀರಿನ ಖಾಲಿ ಪೈಪ್ ಸೇರಿದ ಚಿರತೆ.

kannada-journalist-media-fourth-estate-under-loss

ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ಹಳೇ ರಾಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮಕ್ಕೆ ನುಗ್ಗಿ ಜಾನುವಾರುಗಳನ್ನ ಚಿರತೆಯು ಹೊತ್ತೊಯ್ದಿತ್ತು.  ಹಲವು ದಿನಗಳಿಂದ ನಿರ್ಭೀತಿಯಾಗಿದ್ದ ಗ್ರಾಮಸ್ಥರ ಎದೆ ನಡುಗಿಸುವಂತೆ ಈ ಘಟನೆ ಮಾಡಿದೆ.

ಜನರನ್ನು ಕಂಡು ಚಿರತೆ ಗಾಬರಿಯಿಂದ ಖಾಲಿ ಪೈಪ್ ಸೇರಿದೆ

ಇಂದು ನಾಯಿ ತಿಂದು ಹೋಗುವಾಗ ಜನರನ್ನು ಕಂಡು ಚಿರತೆ ಗಾಬರಿಯಿಂದ ಖಾಲಿ ಪೈಪ್ ಸೇರಿದೆ. ಚಿರತೆ ಪೈಪ್ ಸೇರುತ್ತಿದ್ದಂತೆ ಪೈಪ್ ಸುತ್ತ ಗ್ರಾಮಸ್ಥರು ಸುತ್ತುವರೆದಿದ್ದು, ಚಿರತೆಯ ಅಪಾಯ ಅರಿತು ಹಳೇ ರಾಮನಹಳ್ಳಿ ಗ್ರಾಮಸ್ಥರು ಪೈಪ್ ಮುಚ್ಚಿದ್ದಾರೆ. ಈ ಕುರಿತು ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿ ಮುಚ್ಚಿದ್ದಾರೆ.

Leopard-Live-Mysore-Anxiety-among-villagers

key words ; Leopard-Live-Mysore-Anxiety-among-villagers