ಮಕ್ಕಳ ದಿನಾಚಾರಣೆ ದಿನದಂದೇ ದುರಂತ: ಮೂರು ಮಕ್ಕಳು ಶವವಾಗಿ ಪತ್ತೆ…

ಕೊಡಗು,ನವೆಂಬರ್,14,2020(www.justkannada.in):  ಇಂದು ಮಕ್ಕಳ ದಿನಾಚಾರಣೆ ದಿನ. ಇಂದೇ ದುರಂತವೊಂದು ಸಂಭವಿಸಿದ್ದು ಮೂರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಕುಶಾಲನಗರದ ಸಮೀಪ ತೊರೆನೂರು ಬಳಿ ನಡೆದಿದೆ.kannada-journalist-media-fourth-estate-under-loss

ತೊರೆನೂರು ಬಳಿಯ ಹಾರಂಗಿ ಎಡೆದಂಡೆ ನಾಲೆ ಬಳಿ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದಾರೆ. ನಾಲೆಯಲ್ಲಿ ಮೃತದೇಹ ತೇಲಿ ಬರುತ್ತಿದ್ದನ್ನು ಸ್ಥಳೀಯರು ಗಮನಿಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಸ್ಥಳೀಯರು ಮೃತದೇಹಗಳನ್ನು ನಾಲೆಯಿಂದ ಮೇಲೆತ್ತಿದ್ದಾರೆ.kushal-nagar-tragedy-childrens-day-three-children-found-dead

ಮೂವರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿಯೋ ಇಲ್ಲವೇ ಮಕ್ಕಳೇ ಆಟವಾಡಲು ಹೋಗಿ ಕಾಲು ಜಾರಿ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಸ್ಪಷ್ಟತೆ ಬರಬೇಕಿದೆ.ಇನ್ನು ಮೃತ ಮಕ್ಕಳ ಮೂಲ ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

Key words: kushal nagar- tragedy – children’s day-Three -children -found -dead.