Thursday, August 13, 2026

BDA Apartments

Home Front Page ಕೆಎಸ್ಒಯು ನೇಮಕಾತಿ ಅಕ್ರಮ ಆರೋಪ: ಕುಲಪತಿ, ಕುಲಸಚಿವರಿಗೆ ಸಂಕಷ್ಟ?!

ಕೆಎಸ್ಒಯು ನೇಮಕಾತಿ ಅಕ್ರಮ ಆರೋಪ: ಕುಲಪತಿ, ಕುಲಸಚಿವರಿಗೆ ಸಂಕಷ್ಟ?!

ಮೈಸೂರು, ಅಕ್ಟೋಬರ್ 05, 2021 (www.justkannada.in): ಅಕ್ರಮ ನೇಮಕಾತಿ ಆರೋಪದಡಿ ಮುಕ್ತ ವಿವಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿ ವಿರುದ್ಧ ಎಸಿಬಿಗೆ ದೂರು ನೀಡಲು ಅನುಮತಿ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ರಾಜ್ಯಪಾಲರು ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಕಾನೂನು ಬಾಹಿರವಾಗಿ 7 ತಿಂಗಳಿಂದ ಮುಕ್ತ ವಿಶ್ವವಿದ್ಯಾಲಯದಲ್ಲಿ 90ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶದಂತೆ ತಾತ್ಕಾಲಿಕ ಹಾಗೂ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ಈI ಬಿಡುಗಡೆಗೊಳಿಸಲು ಕ್ರಮ ವಹಿಸಿಲ್ಲ ಎಂದು ಕೆ.ಎಸ್.ಶಿವರಾಮು ಆರೋಪಿಸಿದ್ದಾರೆ.

ನ್ಯಾ. ‘ಕೆ.ಭಕ್ತವತ್ಸಲ ಸತ್ಯಶೋಧನಾ ಸಮಿತಿ ವರದಿಯಂತೆ ರಾಜ್ಯಪಾಲರು ಹೊರಡಿಸಿರುವ ಆದೇಶವನ್ನು ವಿಶ್ವವಿದ್ಯಾಲಯ ಉಲ್ಲಂಘಿಸಿದೆ. ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್, ಕುಲಸಚಿವ, ಹಣಕಾಸು ಅಧಿಕಾರಿ ವಿರುದ್ಧ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲು ಅನುಮತಿ ನೀಡುಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ರಾಜ್ಯಪಾಲರು ಹಾಗೂ ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೆಎಸ್ ಶಿವರಾಮು, ನೇಮಕಾತಿ ಮಾಡಿಕೊಂಡಿರುವವ ಹೆಸರು, ಹುದ್ದೆಗಳು ಸೇರಿದಂತೆ ಅಗತ್ಯ  ದಾಖಲೆಗಳನ್ನು ಲಗತ್ತಿಸಿ, ದೂರು ನೀಡಲು ಅನುಮತಿ ನೀಡುವಂತೆ ಕೋರಿದ್ದಾರೆ.

key words: KSOU appointments illegal allegations, letter to governor against VC