Thursday, September 10, 2026

BDA Apartments

Home Front Page LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ- ಗೃಹ ಸಚಿವ ಪರಮೇಶ್ವರ್

LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,11,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ ಭಾರತದ ಮೇಲೂ ಪರಿಣಾಮ ಬೀರಿದ್ದು ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈಗ ನಾವು ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ರಾಜ್ಯದ ಹಲವೆಡೆ  ಯಾರು ನಿರೀಕ್ಷೆ  ಮಾಡದಂತಹ ಬೆಳವಣಿಗೆ ಆಗಿದೆ . ಅಂತರಾಷ್ಟ್ರಿಯ ಮಟ್ಟದಲ್ಲಿ ಆಗುತ್ತಿರುವ ಯುದ್ದದಿಂದ ಎಫೆಕ್ಟ್ ಆಗಿದೆ.  ಕೇಂದ್ರ ಸರ್ಕಾರ ಸಹ ಕಮಿಟಿ ರಚನೆ ಮಾಡಿ ಕ್ರಮಕ್ಕೆ ಮುದಾಗಿದೆ ರಾಜ್ಯದಲ್ಲೂ ಆದ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದರು.

ಜನಸಾಮಾನ್ಯರು ಹೋಟೆಲ್ ಗಳಿಗೆ ತೊಂದರೆ ಆಗುತ್ತಿದೆ.  ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದಲೂ ಪತ್ರ ಬರೆಯುತ್ತೇವೆ.  ಸಂಬಂಧಪಟ್ಟವರ ಜತೆ ರಾಜ್ಯಮುಖ್ಯಕಾರ್ಯದರ್ಶಿ ಮಾತನಾಡುತ್ತಾರೆ. ಈಗ ನಾವು ರಾಜಕೀಯ ಹೊರತುಪಡಿಸಿ ಕೆಲಸ ಮಾಡಬೇಕಿದೆ ಈಗ ರಾಜಕೀಯ ಮಾಡುತ್ತಾ ಕೂತರೆ ಅದಕ್ಕೆ ಪರಿಹಾರ ಸಿಗಲ್ಲ. ಕೇಂದ್ರ ಸರ್ಕಾರವೇ ಕ್ರಮಕೈಗೊಳ್ಳಬೇಕಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

Key words: Disruption, LPG cylinder, supply, Home Minister, Parameshwara