ಗಾಳಿ ಸಹಿತ ಬಾರಿ ಮಳೆಗೆ ಅಪಾರ ಹಾನಿ:  ರೈತ ಬೆಳೆದಿದ್ದ ಬಾಳೆ ನಾಶ..

ವಿಜಯಪುರ/ಕಲ್ಬುರ್ಗಿ,ಮೇ,22,2019(www.justkannada.in): ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಗಾಳಿ ಸಹಿತ ಬಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ರೈತ ಬೆಳೆದಿದ್ದ ಬಾಳೆ  ವರುಣನ ಆರ್ಭಟಕ್ಕೆ ನೆಲಕಚ್ಚಿದೆ.

ರಾತ್ರಿ ಸುರಿದ ಬಾರಿ ಮಳೆಗೆ ವಿಜಯಪುರ ಜಿಲ್ಲೆ  ಶಿವಗಿರಯಲ್ಲಿ ಗಾಳಿಗೆ 8 ಮನೆಗಳ ಮೇಲ್ಚಾವಣಿ ಹಾರಿಹೋಗಿದೆ. ಹಾಗೆಯೇ  ಐನಾಪುರ ಗ್ರಾಮದಲ್ಲಿ ರೈತ ವಿವೇಕ್  ಬೆಳೆದಿದ್ದ 5 ಎಕರೆ ಬಾಳೆ ಹಾಗೂ  ಇನ್ನೊಂದು ಗ್ರಾಮದಲ್ಲಿ ವಿರೇಶ್ ಎಂಬುವವರು  3 ಎಕರೆಯಲ್ಲಿ ಬೆಳೆದಿದ್ದ ಬಾಳೆ ಭಾರಿ ಮಳೆಯಿಂದಾಗಿ ನೆಲಕಚ್ಚಿದೆ.

ಇನ್ನು ಕಲ್ಬುರ್ಗಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯ ಅವಾಂತರದಿಂದ ಜಿಲ್ಲೆಯ ಶಹಬಾದ್ ನ ಮುತ್ತಗಾ ಗ್ರಾಮದಲ್ಲಿ ನೂರಾರು ಎಕರೆ ಬಾಳೆ ನಾಶವಾಗಿದ್ದು ಬೆಳೆ ನಾಶದಿಂದ ರೈತ ಕಂಗಾಲಾಗಿದ್ದಾನೆ.

Key words: rain, Destroy the banana grown by the farmer.

#Rain #banana #grown # farmer