ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರು ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಬನ್ನಿ- ಸಚಿವ ಸುರೇಶ್ ಕುಮಾರ್ ಮನವಿ.

ಬೆಂಗಳೂರು,ಮೇ,26,2021(www.justkannada.in): ಕಳೆದ ಹದಿನೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಸಹಾಯ ಹಸ್ತವನ್ನು ಚಾಚಬೇಕೆಂದು ಸಚಿವ ಸುರೇಶ್‌ಕುಮಾರ್ ಮನವಿ ಮಾಡಿದ್ದಾರೆ.jk

ಶಿಕ್ಷಕರ‌ ಹಾಗೂ ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರೊಂದಿಗೆ ಶಿಕ್ಷಕರ ಹಾಗೂ ಪದವಿಪೂರ್ವ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರೊಂದಿಗೆ ಇಂದು ಸಭೆ‌ ನಡೆಸಿದ ಸಚಿವ ಸುರೇಶ್ ಕುಮಾರ್, ಸರ್ಕಾರ‌‌ ಇಂತಹ ಸಂಕಷ್ಟದ‌ ಸಂದರ್ಭದಲ್ಲಿಯೂ ಸರ್ಕಾರಿ ಶಾಲಾ‌ ಶಿಕ್ಷಕರೂ ಸೇರಿದಂತೆ ಯಾವುದೇ ವರ್ಗಕ್ಕೂ ವೇತನ‌ ಭತ್ಯೆಗಳ ಕಡಿತಕ್ಕೆ ಮುಂದಾಗಿಲ್ಲ. ರಾಜ್ಯ ಸರ್ಕಾರದ‌ ಆರ್ಥಿಕ ಸ್ಥಿತಿಗತಿಗಳ‌ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ ನಮ್ಮದೇ ಖಾಸಗಿ ಅನುದಾನರಹಿತ ಶಿಕ್ಷಕ‌ ಸಮುದಾಯದ ನೆರವಿಗೆ ಬರಬೇಕಾದ್ದು ನಮ್ಮ‌ ಜವಾಬ್ದಾರಿಯೆಂದು ತಿಳಿಯಬೇಕೆಂದರು. ಶಿಕ್ಷಕ ಪದವೀಧರ‌ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳು ತಮ್ಮೆಲ್ಲರಿಂದ ನಿರೀಕ್ಷಿಸುವ ವೇತನ ಮೊತ್ತವನ್ನು ನೀಡಲು ಮುಂದೆ ಬಂದಿದ್ದು, ಇದನ್ನು ಎಲ್ಲರೂ ಮಾದರಿಯಾಗಿ ಕಾಣಬೇಕಿದೆ ಎಂದರು. ಇಲಾಖೆಯ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ಬಳಸಲು ಸಹ ಆಲೋಚಿಸಲಾಗುತ್ತಿದ್ದು, ಸಂಪನ್ಮೂಲ‌ ಕ್ರೂಢೀಕರಣಕ್ಕೆ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಒಂದು ವೇಳೆ ಮುಂದಿನ‌ ದಿನಗಳಲ್ಲಿ ಸರ್ಕಾರಿ‌ ನೌಕರರ ವೇತನ ಕಟಾವಣೆ ಮಾಡುತ್ತೇವೆಂದು ಸರ್ಕಾರ‌ ನಿರ್ಧರಿಸಿದಲ್ಲಿ, ಈಗ ನೀಡಲು ಶಿಕ್ಷಕರು ನೀಡಲು ಇಚ್ಛಿಸುವ ಮೊತ್ತವನ್ನು ವಿನಾಯ್ತಿ ನೀಡಲು ಆರ್ಥಿಕ ಇಲಾಖೆಯನ್ನು ಕೋರಲಾಗುವುದು ಎಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘಟನೆಯ ಮಂಜುನಾಥ್ ಅವರು ನಿಶ್ಚಿತವಾಗಿಯೂ ಸಂಘಟನೆಯು ಈ ರೀತಿಯ ಮಾನವೀಯ ಸಹಕಾರವನ್ನು ತೋರಲು ಉತ್ಸುಕವಾಗಿದ್ದು, ಸರ್ಕಾರದ‌ ನಿಲುವನ್ನು ಬೆಂಬಲಿಸುತ್ತೇವೆ ಎಂದರು. ಪದವಿಪೂರ್ವ ಉಪನ್ಯಾಸಕರ‌ ಸಂಘಟನೆಯ ಅಧ್ಯಕ್ಷ ನಿಂಗೇಗೌಡ ಅವರು ಮಾತನಾಡಿ ತಮ್ಮ ಸಂಘಟನೆಯು ಹಿಂದೆಯೇ ಈ ರೀತಿಯ ಸಹಕಾರ‌ ನೀಡಲು ಮನವಿ ಸಲ್ಲಿಸಿದ್ದು ಖಂಡಿತವಾಗಿಯೂ ಸರ್ಕಾರದ‌ ನಿಲುವಿಗೆ ಬದ್ಧವಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯೂ ಸಹ ಇದರ ಬಗ್ಗೆ ಕ್ರಿಯಾಶೀಲವಾಗಿ ಸ್ಪಂದಿಸಲು ಇಚ್ಛಿಸಿದ್ದು, ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ತಮ್ಮ ಲಿಖಿತ ಒಪ್ಪಿಗೆ ನೀಡುತ್ತೇವೆಂದು ಸಂಘಟನೆಯ ಅಧ್ಯಕ್ಷ ಶಂಭುಗೌಡನ ಪಾಟೀಲ್, ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ‌ನುಗ್ಲಿ ಹೇಳಿದರು.announce-special-package-private-unaided-school-teacher-minister-suresh-kumar

ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಡಾ.ವೈ.ಎ.ನಾರಾಯಣ ಸ್ವಾಮಿ, ಪುಟ್ಟಣ್ಣ, ಅರುಣ ಶಹಾಪುರ, ಶಶೀಲ್ ನಮೋಷಿ, ಸಂಕನೂರ, ಹಣಮಂತ ನಿರಾಣಿ, ಅ.ದೇವೇಗೌಡ ಹಾಗೂ ಚಿದಾನಂದ ಗೌಡ ಉಪಸ್ಥಿತರಿದ್ದರು.

Key words: Government – school- teachers –private- teachers -Minister -Suresh Kumar