ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಸವಾರ ಸಾವು: ಸ್ಥಳೀಯರಿಂದ ಪ್ರತಿಭಟನೆ…

ತುಮಕೂರು,ಡಿ,14,2019(www.justkannada.in): ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ  ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ದಾಬಸ್ ಪೇಟೆ– ಊರ್ಡಿಗೆರೆ ಮದ್ಯೆ ಕುರುವಲು ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು ಇನ್ನಿಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಘಟನೆ ಬೆಳಿಗ್ಗೆ ಸಂಭವಿಸಿದ್ದು, 10 ಗಂಟೆಯಾದರೂ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಸುಮಾರು 2ಕೀಮೀ ಟ್ರಾಪೀಕ್ ಜಾಮ್ ಆಗಿತ್ತು.  ಅಪಘಾತ ಖಂಡಿಸಿ ಸ್ಥಳದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

Key words: tumkur- collision –between- lorry – bike-death