ಮೈಸೂರು: ಶಾಲೆ ಮುಗಿಸಿ ಮನೆಗೆ ವಾಪಸ್ ಆಗುವ ವೇಳೆ ನಾಪತ್ತೆಯಾದ ಮೂವರು ಮಕ್ಕಳು..

ಮೈಸೂರು,ಮೇ,31,2019(www.justkannada.in): ಶಾಲೆ ಮುಗಿಸಿ ವಾಪಸ್ ಮನೆಗೆ  ಬರುವ ವೇಳೆ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರಿನ ಪಿರಿಯಾಪಟ್ಟಣದ ಈಚೂರ್ ಬಸ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆದಿತ್ಯ ಅರಸ್(13), ಪ್ರದೀಪ(11), ಪವನ್(10) ನಾಪತ್ತೆಯಾದ ಮಕ್ಕಳು. ಮೂವರು ಮಕ್ಕಳು ನಿನ್ನೆ ಸಂಜೆ ಶಾಲೆ ಮುಗಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ನಿಲ್ದಾಣದಲ್ಲಿ ಆಟವಾಡುತ್ತಿದ್ದಂತೆ ಕೆಲಹೊತ್ತಿನ ನಂತರ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ಮೂವರು ಮಕ್ಕಳಿಗಾಗಿ ಸಂಬಂಧಿಕರು ನಿನ್ನೆಯಿಂದ  ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆಯಾದರು ಮನೆಗೆ ಬಂದಿಲ್ಲ. ಮಕ್ಕಳು ನಾಪತ್ತೆಯಾದ ಹಿನ್ನೆಲೆ ಪೋಷಕರು ಆತಂಕಗೊಂಡಿದ್ದು ಇಂದು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಕ್ಕಳನ್ನ ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ.

Key words: Three children missing in mysore.

#children #missing # mysore.