ಸಿದ್ದರಾಮೋತ್ಸವ ಆಚರಣೆ, ಇದು ಸಿದ್ದರಾಮಯ್ಯ ಅವರ ಕೊನೆಯ ಅವತಾರ- ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯ.

kannada t-shirts

ಮೈಸೂರು,ಜುಲೈ,5,2022(www.justkannada.in): ಸಿದ್ದರಾಮೋತ್ಸವ ಆಚರಣೆ ಬಗ್ಗೆ ವ್ಯಂಗ್ಯವಾಡಿರುವ ಸಚಿವ ಎಸ್.ಟಿ.ಸೋಮಶೇಖರ್, ಇದು ಸಿದ್ದರಾಮಯ್ಯನವರ ಕೊನೆಯ ಅವತಾರ ಎಂದು ಟೀಕಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇವರು ಸಿಎಂ ಆಗಿ ಸರಿಯಾಗಿ ಕೆಲಸ ಮಾಡಿದ್ದರೇ 35 ಸಾವಿರ ಮತಗಳಿಂದ ಹೀನಾಯವಾಗಿ ಸೋಲುತ್ತಿರಲಿಲ್ಲ. ಇಂತಹ ವೈಪಲ್ಯಗಳನ್ನು ಮರೆಮಾಚಿಕೊಳ್ಳಲು ಸಿದ್ದರಾಮೋತ್ಸವ ಆಚರಿಸುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ವೈಭವೀಕರಣ ಅಷ್ಟೇ. ಹುಟ್ಟುಹಬ್ಬವನ್ನು ಕಾಂಗ್ರೆಸ್ ಹೆಸರಿನಲ್ಲೇ ಮಾಡಬಹುದಿತ್ತು. ಆದರೆ ಒಬ್ಬ ವ್ಯಕ್ತಿ ಪರವಾಗಿ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜುಲೈ 10ರ ಬಳಿಕ ದಸರಾ ಹೈಪವರ್ ಕಮಿಟಿ ಮೀಟಿಂಗ್

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಜುಲೈ 10ರ ಬಳಿಕ ದಸರಾ ಹೈಪವರ್ ಕಮಿಟಿ ಮೀಟಿಂಗ್ ನಡೆಯಲಿದೆ. ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಆ ಬಳಿಕ ಮೈಸೂರಿನಲ್ಲಿ ಸಭೆ ನಡೆಸಲಾಗುವುದು ಎಂದರು.

ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ಎಸಿಬಿ ದಾಳಿಗೆ ಕಾಂಗ್ರೆಸ್ ವಿರೋಧ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಜಮೀರ್ ಮನೆ ಮೇಲೆ ಎಸಿಬಿ ದಾಳಿಗೆ ಮೊದಲು ಖುಷಿ ಪಟ್ಟಿರೋದು ಕಾಂಗ್ರೆಸ್‌ ನವರೆ. ಅವರು ಸಿಎಂ ಆಗಲಿ, ಇವರು ಸಿಎಂ ಆಗಲಿ ಎಂದು ಜಮೀರ್  ಅಹ್ಮದ್ ಖಾನ್ ಹೇಳುತ್ತಿರುತ್ತಾರೆ. ಅದಕ್ಕೆ ಒಳಗೆ ಖುಷಿ ಪಟ್ಕೊಂಡು, ಹೊರಗಡೆ ಪ್ರತಿಭಟನೆ ಮಾಡ್ತಿದ್ದಾರೆ. ಜಮೀರ್ ಪ್ರಾಮಾಣಿಕವಾಗಿದ್ರೆ ಏನೂ ಆಗಲ್ಲ. ಯಾಕೆ ಕಾಂಗ್ರೆಸ್‌ನವರು ಪ್ರತಿಭಟಿಸಬೇಕು. ಕಾಂಗ್ರೆಸ್‌ನವರು ನೀವು ಪ್ರಾಮಾಣಿಕವಾಗಿದ್ರೆ ಏನು ಆಗಲ್ಲ ಅಂತ ಧೈರ್ಯ ತುಂಬಬೇಕು. ಅದನ್ನ ಬಿಟ್ಟು ಪ್ರತಿಭಟನೆ ಏಕೆ ಮಾಡಬೇಕು.? ಎಂದು ಪ್ರಶ್ನಿಸಿದರು.

ಪಿಎಸ್ ಐ ಹಗರಣದಲ್ಲಿ ಐಎಎಸ್ ಅಧಿಕಾರಿ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಮುಖ್ಯಮಂತ್ರಿಗಳನ್ನ ಅಭಿನಂದಿಸುತ್ತೇನೆ. ನಿರುದ್ಯೋಗಿಗಳ ಬದುಕಲ್ಲಿ ಚೆಲ್ಲಾಟವಾಡಿದವರ ಮೇಲೆ ಸರ್ಕಾರ ಕ್ರಮ ಜರುಗಿಸಿದೆ.ಈ ಪ್ರಕರಣದಲ್ಲಿ ಎಷ್ಟೇ ದೊಡ್ಡವರಾದರೂ ಮಟ್ಟ ಹಾಕುವ ಕೆಲಸ ಸರ್ಕಾರ  ಮಾಡಲಿದೆ. ಯಾವ ಕಾರಣಕ್ಕೂ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ. ಎಸಿಬಿ ಅಥವಾ ತನಿಖಾಧಿಕಾರಿಗೆ ಸರ್ಕಾರ ಮುಕ್ತ ಅಧಿಕಾರ ನೀಡಿದೆ. ಕಾನೂನು ಬಾಹಿರ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಸಿಎಂ ಈ ಮುಂಚೆಯೇ ಮಾತನಾಡುತ್ತಿದ್ದರು. ಸಿಎಂ ಈ ವಿಚಾರದಲ್ಲಿ ದಿಟ್ಟ, ನೇರ ಕ್ರಮ ಕೈಗೊಂಡಿದ್ದಾರೆ. ಸಿಎಂಗೆ ಒತ್ತಡ ಇದ್ದರು ಸಹ  ಕ್ರಮ ಕೈಗೊಂಡಿದ್ದಾರೆ.

ನಿರುದ್ಯೋಗಿಗಳಿಗೆ ತೊಂದರೆ ಕೊಟ್ಟವರಿಗೆ ಶಿಕ್ಷೆ ನೀಡಬೇಕೆಂಬುದು ಸಿಎಂ ನಿಲುವಾಗಿತ್ತು. ಇದರಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಆಗೋದಿಲ್ಲ. ಉಪ್ಪು ತಿಂದವರು ನೀರು ಕುಡೀತಾರೆ. ಎಷ್ಟೇ ದೊಡ್ಡವರಾದವರು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಇದೆ ಕಾಂಗ್ರೆಸ್ ಸರ್ಕಾರ ಇದ್ದರೆ  ಐಪಿಎಸ್  ಅಧಿಕಾರಿ ಬಂಧನವಾಗಲು ಬಿಡುತ್ತಿದ್ರಾ..? ಇಂತಹ ನೂರು ಕೇಸ್ ಗಳನ್ನ ಕಾಂಗ್ರೆಸ್ ಮುಚ್ಚಿಹಾಕಿದೆ ಎಂದು ಆರೋಪಿಸಿದರು.

Key words: Siddharamotsava-celebration –Siddaramaiah-Minister-ST Somashekhar

website developers in mysore