ಬಳ್ಳಾರಿ , ವಿಜಯಪುರ, ಕಲ್ಬುರ್ಗಿಯನ್ನ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರಕ್ಕೆ ಮನವಿ- ಸಚಿವ ಭೈರತಿ ಬಸವರಾಜ್…

ಹುಬ್ಬಳ್ಳಿ,ಜೂ,9,2020(www.justkannada.in): ಬಳ್ಳಾರಿ, ವಿಜಯಪುರ, ಕಲಬುರಗಿಯನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಭೈರತಿ ಬಸವರಾಜ್, ಸ್ಮಾರ್ಟ್ ಸಿಟಿಯಲ್ಲಿ 58 ಯೋಜನೆಗಳಿವೆ. ಈ ನಡುವೆ ಬಳ್ಳಾರಿ, ವಿಜಯಪುರ, ಕಲಬುರಗಿಯನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.select-bellary-vijayapura-kalburgi-smart-city-minister-bhairati-basavaraj

ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅವಳಿ ನಗರದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಆದಕಾರಣ ಜನತಾ ಬಜಾರ್ ವ್ಯಾಪಾರಿಗಳಿಗೆ ಬೇರೆಡೆ ಜಾಗಕ್ಕೆ ಸೂಚನೆ  ನೀಡಬೇಕು ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.

Key words: select- Bellary- Vijayapura- Kalburgi- Smart City- Minister- Bhairati Basavaraj.