ಕಾಂಗ್ರೆಸ್ ನಿಂದ ‘Pay CM’ ಬಳಿಕ  ‘Say CM’  ಅಭಿಯಾನ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ.

ಶಿವಮೊಗ್ಗ, ಅಕ್ಟೋಬರ್,19,2022(www.justkannada.in): Pay CM ಬಳಿಕ  Say CM  ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ವಿರುದ್ಧ  ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ನವರಿಗೆ ಜೀವನದಲ್ಲಿ ಹೋರಾಟ ಮಾಡೋದು ಗೊತ್ತಿಲ್ಲ. ಏನೋ ಒಂದು ಹೇಳಿಕೆ ಕೊಡುವ ಕೆಲಸ ಮಾಡುತ್ತಾರೆ.  ಕಾಂಗ್ರೆಸ್ ಇರುವುದು ಆರೋಪಿಸಲು,  ಹೋರಾಡುವುದಕ್ಕಲ್ಲ.  ಅವರ ಯಾವ ಹೇಳಿಕೆಗೂ ಬೆಲೆ ಇಲ್ಲ. ಅವರ ಟೀಕೆಗಳಿಗೆ ಉತ್ತರಿಸಲ್ಲ.

ಚುನಾವಣೆ ಬರಲಿ ಎಂದು ನಾವು ಕಾಯುತ್ತಿದ್ಧೇವೆ ನೋಡೋಣ. ಅವರು ಗೆಲ್ಲುತ್ತಾರೋ ನಾವು ಗೆಲ್ಲುತ್ತೇವೋ..? ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: SayCM -campaign – Congress-Former minister- KS Eshwarappa