ಈ ವಾರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಮಿಸ್ ಮಾಡ್ಕೋಬೇಡಿ !

ಬೆಂಗಳೂರು, ಡಿಸೆಂಬರ್ 18, 2019 (www.justkannada.in): ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ.

ಚಿತ್ರವನ್ನು ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮಾಡಿದ್ದಾರೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಇದನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಿಷಿ ಮತ್ತು ನಾಯಕಿ ಧನ್ಯಾ ರಾಮಕೃಷ್ಣರ ಪಾತ್ರವೂ ವಿಭಿನ್ನವಾಗಿದೆ.

ದತ್ತಣ್ಣ, ರಂಗಾಯಣ ರಘು, ಮಿತ್ರಾ ಮುಂತಾದವರ ಪಾತ್ರವೂ ಅಷ್ಟೇ ವಿಶೇಷವಾಗಿವೆ. ಈ ಚಿತ್ರದ ಕಥೆ ಏನೆಂಬುದರ ಬಗ್ಗೆ ಚಿತ್ರತಂಡ ಎಲ್ಲವನ್ನೂ ಗೌಪ್ಯವಾಗಿಟ್ಟಿದೆ.