ಸಿದ್ದರಾಮಯ್ಯ ಭಾವಿ ಸಿಎಂ ಎಂಬ ಹೇಳಿಕೆ ನೀಡಿದ ಶಾಸಕ ಜಮೀರ್ ವಿರುದ್ಧ ಅಸಮಾಧಾನ ಹೊರಹಾಕಿದ ಆರ್.ಧೃವನಾರಾಯಣ್.

ಮೈಸೂರು,ಜೂನ್,20,2021(www.justkannada.in): ಸಿದ್ದರಾಮಯ್ಯ ಭಾವಿ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿದ ಶಾಸಕ  ಜಮೀರ್ ಅಹ್ಮದ್ ಖಾನ್ ವಿರುದ್ಧ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಅಸಮಾಧಾನ ಹೊರಹಾಕಿದ್ದಾರೆ.jk

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಆರ್.ದೃವನಾರಾಯಣ್,  ಈ ಹಿಂದೆ ಜೆಡಿಎಸ್ ನಲ್ಲಿ ಇದ್ದಾಗ ಕುಮಾರಣ್ಣ ಅಂತಿದ್ರು ಇದೀಗ ಕಾಂಗ್ರೆಸ್ ನಲ್ಲಿದ್ದು ಸಿದ್ರಾಮಣ್ಣ ಅಂತಿದ್ದಾರೆ. ಜಮೀರ್ ಈ ರೀತಿ‌ ಹೇಳುವುದು ರೂಢಿ ಎಂದು ಶಾಸಕ ಜಮೀರ್ ವಿರುದ್ದ ಲೇವಡಿ ಮಾಡಿದರು.

ಸಿದ್ದರಾಮಯ್ಯ ಸಿಎಂ‌ ಎಂದು ಇದು ಹೇಳುವ ಸಮಯವಲ್ಲ. ಈ ರೀತಿಯ ಹೇಳಿಕೆಯಿಂದ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡುತ್ತದೆ. ತೀವ್ರ‌ ಬೇಸರ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಈ ರೀತಿಯ ಹೇಳಿಕೆಯನ್ನು ನೀಡದಂತೆ ಶಾಸಕ ಜಮೀರ್ ಗೆ ಸೂಚನೆ ನೀಡಿದರು. ಜಮೀರ್ ಗೆ ನೋಟಿಸ್ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಆರ್.ದೃವನಾರಾಯಣ್ ಹೇಳಿದರು.

Key words: R. Dhruvanarayan –outrage- against -MLA Jameer – statement -Siddaramaiah -CM.