ಪ್ರಧಾನಿ ಮೋದಿ ಈ ದೇಶದ ರಕ್ಷಕ: ಅವರು ದೋಸ್ತಿಗೆ ದೋಸ್ತಿ, ದುಷ್ಮನ್ ಗೆ ದುಷ್ಮನ್ ಎಂದ ಸಚಿವ ಕೆ.ಎಸ್ ಈಶ್ವರಪ್ಪ…

ಶಿವಮೊಗ್ಗ,ಜೂ,1,2020(www.justkannada.in):  ಪ್ರಧಾನಿ ಮೋದಿ ಅವರು ಈ ದೇಶದ ರಕ್ಷಕ. ಅವರು ದೋಸ್ತಿಗೆ ದೋಸ್ತಿ, ದುಷ್ಮನ್ ಗೆ ದುಷ್ಮನ್ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಹೊಗಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ವಿಶ್ವದಲ್ಲಿ ಹಲವು ನಾಯಕರು ಪ್ರಧಾನಿ ಮೋದಿ ಅವರ ಗೆಳೆತನಕ್ಕೆ ಮುಂದಾಗಿದ್ದಾರೆ. ಮೋದಿ ಅವರನ್ನ ಟೀಕಿಸುವವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಪ್ರಧಾನಿ ಮೋದಿ ಅವರ ಸರ್ಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ ಎಂದು ಗುಣಗಾನ ಮಾಡಿದರು.

ಹಾಗೆಯೇ ಪ್ರಧಾನಿ ಮೋದಿ ಅವರು ಈ ದೇಶದ ರಕ್ಷಕ. ಅವರು ದೋಸ್ತಿಗೆ ದೋಸ್ತಿ, ದುಷ್ಮನ್ ಗೆ ದುಷ್ಮನ್ ಎಂದು ನುಡಿದರು.

Key words: Prime Minister -Modi –dosti- minister KS Eshwarappa