ಮುಸ್ಲಿಮರ ಓಲೈಸುವಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂತ್ರಗಾರಿಗೆ: ಪ್ರಮೋದ ಮುತಾಲಿಕ್‌

ಸವಣೂರು, ನವೆಂಬರ್ 30, 2021 (www.justkannada.in): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಮರ ಓಲೈಸುವಿಕೆ ತಂತ್ರಗಾರಿಗೆ ತೋರಿಸುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ದೂರಿದ್ದಾರೆ.

ಸವಣೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಈ ರೀತಿ ಮುಸ್ಲಿಮರ ಮೇಲೆ ಮೃದುಧೋರಣೆ ತೋರಿದರೆ ತುಂಬಾ ಅಪಾಯ. ನಿಮಗಷ್ಟೇ ಅಲ್ಲ;ಇಡಿ ದೇಶಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಟೀಕಿಸಿದ್ದಾರೆ.

ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆ ಮತ್ತು ಸರ್ಕಾರದ ಜವಾಬ್ದಾರಿ. ಇಂತಹ ಘಟನೆಗಳನ್ನು ತಡೆಯಬೇಕು. ನಮಗೂ ಕಲ್ಲು ಎಸೆಯಲು ಬರುತ್ತದೆ’ ಎಂದಿದ್ದಾರೆ.