“ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು” : ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಬೆಂಗಳೂರು,ಫೆಬ್ರವರಿ,21,2021(www.justkannada.in) : ಮೀಸಲಾತಿ ಕೇಳುವುದು ಜೇನುಗೂಡಿಗೆ ಕೈ ಹಾಕಿದಂತೆ. ನಿಯಮಗಳಿಗೆ ಅನುಸಾರವಾಗಿ ಮೀಸಲಾತಿ ನೀಡಬೇಕಾಗುತ್ತದೆ. ರಾಜಕೀಯ ಕಾರಣಕ್ಕೆ ಬಲಿತವರು ದಲಿತರ ಮೀಸಲಾತಿ ಕೇಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

jk

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ ಅಸಮಾನತೆ ಇರುವವರಿಗೆ ಮೀಸಲಾತಿ ಅಗತ್ಯವಾಗಿದೆ ಎಂದಿದ್ದಾರೆ.

ದೊಡ್ಡ ಸಮುದಾಯಗಳಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲ

ಅಭಿವೃದ್ಧಿ ಪ್ರಾಧಿಕಾರಗಳ ರಚನೆಯ ಕೂಗು ಹೆಚ್ಚಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಣ್ಣ ಜಾತಿಗಳ ಅಭಿವೃದ್ಧಿ ಪ್ರಾಧಿಕಾರ ಅಗತ್ಯ. ದೊಡ್ಡ ಸಮುದಾಯಗಳಿಗೆ ಪ್ರಾಧಿಕಾರದ ಅವಶ್ಯಕತೆ ಇರುವುದಿಲ್ಲ.

ಒಕ್ಕಲಿಗರಿಗೆ ಪ್ರಾಧಿಕಾರ ಮಾಡಿದರೆ, ಒಳ ಜಾತಿಗಳ ಕೂಗು ಏಳಲಿದೆ

ಕುರುಬ, ಲಿಂಗಾಯತ, ಒಕ್ಕಲಿಗರಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲ. ಒಕ್ಕಲಿಗರಿಗೆ ಪ್ರಾಧಿಕಾರ ಮಾಡಿದರೆ, ಒಳ ಜಾತಿಗಳ ಕೂಗು ಏಳಲಿದೆ. ಪ್ರಾಧಿಕಾರ ರಚಿಸಿದರೆ ತಾತ್ಕಾಲಿಕ  ಖುಷಿ ನೀಡಬಹುದು. ಆದರೆ, ದೂರಗಾಮಿ ಪರಿಣಾಮ ಬೀರಲಿದೆ ಎಂದು ಹೇಳಿದರು.

ಪಿಎಫ್ ಐ ಸಂಚು ತಡೆಯಲು ಆರ್ ಎಸ್ ಎಸ್ ಹೋರಾಟ

Politics,reason,victims,Dalits,Reservation,Don't ask,National,General,Secretary,C.T.Ravi

ಆರ್ ಎಸ್ ಎಸ್ ಜಾತಿ ಅಸಮಾನತೆ ವಿರುದ್ಧ ಹೋರಾಟ ನಡೆಸುತ್ತಿದೆ. ಆರ್ ಎಸ್ ಎಸ್ ಅನ್ನು ಟಾರ್ಗೆಟ್ ಮಾಡಿದಂತೆ. ಖಿಲ್ಜಿ, ಔರಂಗಜೇಬ್, ಮಲ್ಲಿಕಾಫರ್, ಲಾಡನ್ ನ ಮನಸ್ಥಿತಿಯೇ ಪಿಎಫ್ ಐನ ಮನಸ್ಥಿತಿ. ಪಿಎಫ್ ಐ ಸಂಚು ತಡೆಯಲು ಆರ್ ಎಸ್ ಎಸ್ ಹೋರಾಟ ಮಾಡುತ್ತಿದೆ. ಪಿಎಫ್ ಐ ಸಂಚನ್ನು ಎದುರಿಸುವ ಶಕ್ತಿ ಭಾರತಕ್ಕಿದೆ ಎಂದರು.

key words : Politics-reason-victims-Dalits-Reservation-Don’t ask-National- General-Secretary-C.T.Ravi