ಬೆಂಗಳೂರಲ್ಲಿ ಟೆನಿಸ್ ವೃತ್ತಿ ಜೀವನಕ್ಕೆ ಕೊನೆಯಾಡಿದ ಪೇಸ್

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಲಿಯಾಂಡರ್​ ಪೇಸ್​ ಬೆಂಗಳೂರು ಓಪನ್​ ಟೂರ್ನಿಯಲ್ಲಿ ತಮ್ಮ ವೃತ್ತಿ ಜೀವನದ ಅಂತಿಮ ಆಟವನ್ನು ಆಡಿದ್ದರು.

ನಿನ್ನೆ ಟೂರ್ನಿಯ ಅಂತಿಮ ಹಂತದಲ್ಲಿ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಓಪನ್‌ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ, ಪೇಸ್‌ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹಾಕಿ ಪಟು ಜೂಡ್‌ ಫೆಲಿಕ್ಸ್‌, ಈಜುಪಟು ರೇಷ್ಮಾ ಮತ್ತು ನಿಶಾ ಮಿಲ್ಲೆಟ್‌, ಅಥ್ಲೀಟ್‌ ಪ್ರಮೀಳಾ ಅಯ್ಯಪ್ಪ, ಅಶ್ವಿನಿ ನಾಚಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ನೆರೆದಿದ್ದ ಮಂದಿ ಒಂದು ‘ಕಡೆಯ ಘರ್ಜನೆ’ ಅಂತಾ ಘೋಷಣೆ ಕೂಗಿದರು.