ಅಪರೇಷನ್ ಕಮಲ ಮತ್ತು ಕೇಂದ್ರ ಬಜೆಟ್ ವಿಚಾರ: ನೋ ರಿಯಾಕ್ಷನ್ ಎಂದ ಸಚಿವ ಹೆಚ್.ಡಿ ರೇವಣ್ಣ…

ಹಾಸನ,ಜು,5,2019(www.justkannada.in):  ಅಪರೇಷನ್ ಕಮಲ ವಿಚಾರ ಮತ್ತು ಇಂದು ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿಲು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ನಿರಾಕರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ನೋ ರಿಯಾಕ್ಷನ್ ಎಂದ  ಸಚಿವ ಎಚ್.ಡಿ.ರೇವಣ್ಣ, ಆಪರೇಷನ್ ಕಮಲದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿ ನಾನಲ್ಲ. ನಾವು ಅಭಿವೃದ್ಧಿ ಬಗ್ಗೆ ಚಿಂತಿಸಲಾಗುವುದು. ಮುಂಬರುವ ದಸರಾ ಮಹೋತ್ಸವ ಸಜ್ಜುಗೊಳಿಸಲು ಮುಂದಾಗಿದ್ದೀವಿ ಎಂದು ಪ್ರತಿಕ್ರಿಯೆ ನೀಡಿದರು.

ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣಕ್ಕೆ ಶೇ.90 ಭೂಮಿ ವಶಪಡಿಸಿಕೊಳ್ಳಲಾಗಿದೆ‌. ಈಗಾಗಾಲೇ ಬೆಂಗಳೂರಿನಿಂದ ನಿಡುಗಟ್ಟದವರೆಗೆ ಕಾಮಗಾರಿ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ಮೈಸೂರಿನಿಂದ ಕಾಮಗಾರಿ ಆರಂಭಿಸಲಾಗುವುದು.  ಕೇಂದ್ರ ಸರ್ಕಾರ ಸಹ ಈ ಯೋಜನೆಗೆ ಹಣ ಮಂಜೂರು ಮಾಡಿದೆ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಕೇಂದ್ರ ಬಜೆಟ್ ನಾನು ನೋಡಿಲ್ಲ ನೋಡದೇ ಹೇಳುವುದಿಲ್ಲ ಎಂದು ಸಚಿವ ಹೆಚ್.ಡಿ ರೇವಣ್ಣ ನುಡಿದರು.

Key words: Operationkamala- central budget-  Minister -HD Revanna -No Reaction