ಚೆನ್ನಾಗಿ ಕೆಲಸ  ಮಾಡಿದವರು ಆತಂಕ ಪಡುವ ಅಗತ್ಯವಿಲ್ಲ- ಸಂಪುಟ ವಿಸ್ತರಣೆ ಬಗ್ಗೆ ಸಿ.ಟಿ ರವಿ ಪ್ರತಿಕ್ರಿಯೆ.

ಬೆಂಗಳೂರು,ಜುಲೈ,28,2021(www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಿದ್ದಂತೆ ವಲಸಿಗ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪು ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಚೆನ್ನಾಗಿ ಕೆಲಸ  ಮಾಡಿದವರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.jk

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಸಿಟಿ ರವಿ,  ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ವಿಸ್ತರಣೆ  ಮಾಡಲಾಗುತ್ತದೆ.  ವಲಸಿಗರನ್ನ ಬಿಜೆಪಿಯವರು ನಂಬಲ್ಲ ಅಂತಿದ್ರು. ಆದರೆ ಬಸವರಾಜ ಬೊಮ್ಮಾಯಿ ಹೊರಗಿನಿಂದ ಬಂದು ಸಿಎಂ ಆಗಿದ್ದಾರೆ.  ನಮ್ಮಲ್ಲಿ ಹೊರಗಿನವರು ಒಳಗಿನವರು ಅಂತೇನಿಲ್ಲ ಎಂದರು.

Key words:  not – worry-CT Ravi-comment –cabinet- Expansion.