ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಕಾಲಿಡಲು ಬಿಡಲ್ಲ- ಸಚಿವ ಆರ್.ಅಶೋಕ್

ಬೆಂಗಳೂರು,ಡಿಸೆಂಬರ್,5,2022(www.justkannada.in): ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಕಾಲಿಡಲು ಬಿಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಈ ಕುರಿತು ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಕ್ಯಾತೆ ತೆಗೆಯೋದೆ ಮಹಾರಾಷ್ಟ್ರ ಕಾರ್ಯವಾಗಿದೆ. ರಾಜ್ಯದ ಒಂದಿಂಚು ಜಾಗವನ್ನ ಬಿಡಲ್ಲ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಮುಂದಾದ್ರೆ ಕ್ರಮ ವಹಿಸುತ್ತೇವೆ ಎಂದರು.kpcc-president-dk-shivakumar-function-minister-r-ashok

ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬರಲು ಬಿಡಲ್ಲ.  ಎಂಇಎಸ್ ವರ್ಚಸ್ಸು ಕಡಿಮೆ ಆಗುತ್ತಿದೆ. ಹೀಗಾಗಿ  ಈ ರೀತಿ ಮಾಡುತ್ತಿದ್ದಾರೆ.  ಮಹಾಜನ್ ವರದಿ ಅಂತಿಮ ಎಂದು ಕೋರ್ಟ್ ಹೇಳಿದೆ. ದಾಖಲೆ ಜನಾಭಿಪ್ರಾಯ  ಎಲ್ಲವೂ ನಮ್ಮ ಕಡೆಯೇ ಇದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ನೆಲ ಜಲ ಬಾಷೆ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧ. ಸಚಿವರ ಭೇಟಿಗೆ ಪ್ರತಿಯಾಗಿ ನಾವು ರಣತಂತ್ರ ಮಾಡಿದ್ದೇವೆ.  ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇವೆ ಎಂದು ಸಚಿವ ಅಶೋಕ್ ತಿಳಿಸಿದರು.

Key words: Maharashtra -ministers -not allowed – Belgaum – Minister -R. Ashok