ಬಿಜೆಪಿಯಿಂದ ರಾಜ್ಯಕ್ಕೆ ಬಂದಿರುವ ಕಳಂಕ ನಿರ್ಮೂಲನೆ ಮಾಡುತ್ತೇವೆ- ಬಸ್ ಯಾತ್ರೆಗೂ ಮುನ್ನ ಡಿಕೆ ಶಿವಕುಮಾರ್ ಹೇಳಿಕೆ.

ಬೆಂಗಳೂರು,ಜನವರಿ,11,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಇಂದಿನಿಂಧ ಪ್ರಜಾಧ್ವನ ಬಸ್ ಯಾತ್ರೆ ನಡೆಸಲು ಸಜ್ಜಾಗಿದೆ.

ಬಸ್ ಯಾತ್ರೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಜೆಪಿಯಿಂದ ನಮ್ಮ ರಾಜ್ಯಕ್ಕೆ  ಕಳಂಕ ಬಂದಿದೆ. ಕಳಂಕ ನಿರ್ಮೂಲನೆ ಮಾಡಲು  ಹೊರಟಿದ್ದೇವೆ. ಐತಿಹಾಸಿಕ ಬಸ್ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಯಾತ್ರೆ ಮುಗಿಸಿ ಕ್ಷೇತ್ರವಾರು ಸಂಚರಿಸುತ್ತೇವೆ. 224 ಕ್ಷೇತ್ರಗಳಲ್ಲಿ ಬಸ್ ಯಾತ್ರೆ ಮಾಡುತ್ತೇವೆ. 20 ಜಿಲ್ಲೆಗಳಲ್ಲಿ ನಾನು ಸಿದ್ಧರಾಮಯ್ಯ ಸಂಚರಿಸುತ್ತೇವೆ ಎಂದರು.

Key words: kpcc-president-  DK Shivakumar- bus yatra