‘ ೨೪ ಕಂಡೀಷನ್ ‘ ಪೂರೈಸಿದ್ರೆ ಸರ್ಕಾರದಿಂದಲೇ ಸಾಮೂಹಿಕ ವಿವಾಹ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

 

ಬೆಂಗಳೂರು, ಅ.31, 2019 : (www.justkannada.in news) : ಇನ್ನು ಮುಂದೆ ಸರ್ಕಾರದಿಂದಲೇ ಸಾಮೂಹಿಕ ವಿವಾಹ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಹೇಳಿದಿಷ್ಟು…

ಎ-ದರ್ಜೆಯ ದೇಗುಲಗಳಲ್ಲಿ ವಿವಾಹಕ್ಕೆ ಅವಕಾಶ. ಧಾರ್ಮಿಕ ದತ್ತಿ ಇಲಾಖೆಯ ೧೦೦ ದೇಗುಲ ಆಯ್ಕೆ ಮಾಡಿಕೊಂಡಿದ್ದೇವೆ. ಏ.೨೬,ಮೇ ೨೪ ರಂದು ವಿವಾಹ ನಡೆಸಲು ನಿರ್ಧಾರ. ಇದರ ಬಗ್ಗೆ ಸುತ್ತೋಲೆಗಳನ್ನ ಹೊರಡಿಸಲಾಗಿದೆ.  ವಿವಾಹಕ್ಕೊಳಗಾಗುವವರಿಗೆ ನಿಯಮ ಮಾಡಿದ್ದೇವೆ. ೩೦ ದಿನಕ್ಕೂ ಮೊದಲೇ ನೊಂದಣಿ ಮಾಡಿಕೊಳ್ಳಬೇಕು.
ಎರಡನೇ ಮದುವೆಗೆ ಇಲ್ಲಿ ಅವಕಾಶವಿಲ್ಲ. ವಧು- ವರರ ವಯಸ್ಸಿನ ಬಗೆಗೆ ಖಚಿತತೆ ನೀಡಬೇಕು. ಸ್ಥಳದಲ್ಲಿಯೇ ವಿವಾಹ ನೋಂದಣಿ ವ್ಯವಸ್ಥೆ . ವಧು-ವರರಿಗೆ ಪ್ರೋತ್ಸಾಹ ಧನದ ವ್ಯವಸ್ಥೆಯೂ ಇದೆ. ೬೫ ಸಾವಿರ ರೂ ಜೋಡಿಗೆ ಖರ್ಚು ಬರಲಿದೆ.ಒಟ್ಟು ೨೪ ಕಂಡೀಷನ್ ಗಳನ್ನ ಪೂರೈಸಬೇಕು, ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ.

ವಧು- ವರರಿಗೆ ೧೮/೨೧ ವರ್ಷ ವಯಸ್ಸು ಇರಬೇಕು. ವಯಸ್ಸು ಖಚಿತಪಡಿಸಿಕೊಂಡೇ ವಿವಾಹಕ್ಕೆ ಅವಕಾಶ. ೪೦ ಸಾವಿರ ರೂ.ವೆಚ್ಚದ ೮ ಗ್ರಾಂ ಚಿನ್ನದ ಮಾಂಗಲ್ಯ. ವರನಿಗೆ ೫ ಸಾವಿರ ರೂ,ವಧುವಿಗೆ ೧೦ ಸಾವಿರ ವಸ್ತ್ರಕ್ಕೆ ಖರ್ಚು. ವಿವಾಹದ ಬಳಿಕ ಅವರ ಬ್ಯಾಂಕ್ ಖಾತೆಗೆ ಹಣ ಜಮೆ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ.

ಸಾಮೂಹಿಕ ವಿವಾಹಕ್ಕೆ ಪ್ರತಿವರ್ಷ ೫.೫ಕೋಟಿ ಖರ್ಚು, ೫೫ ಸಾವಿರದಂತೆ ೧ ಸಾವಿರ ಜೋಡಿಗೆ ೫.೫ಕೋಟಿ ರೂ. ವೆಚ್ಚ. ಪ್ರಸ್ತುತ ದೇಗುಲಗಳಲ್ಲಿಯೇ ಹಣದ ವ್ಯವಸ್ಥೆಯಿದೆ. ನಮ್ಮ ಅನುಮತಿ ಕೊಟ್ಟರೆ ಅವರೇ ಖರ್ಚು ಮಾಡುತ್ತಾರೆ. ಬೆಂಗಳೂರಿನ ಬನಶಂಕರಿ,ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ,ಕುಕ್ಕೆ ಸುಬ್ರಮಣ್ಯದಲ್ಲಿ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದ ಸಚಿವರು.

—————-

key words : karnataka-governament-ready-to-introduce-mass.marriage-system-24.condetions-must-fallow