ಹೊಸ ವರ್ಷಾಚರಣೆ ನೆಪದಲ್ಲಿ ಮೈಮರೆಯಬೇಡಿ: ಪೊಲೀಸರ ಅಭಿಯಾನಕ್ಕೆ ಕೈ ಜೋಡಿಸಿದ ‘ರಾಕಿ ಭಾಯ್’

ಬೆಂಗಳೂರು, ಡಿಸೆಂಬರ್ 31, 2019 (www.justkannada.in): ಹೊಸ ವರ್ಷಾಚರಣೆ ವೇಳೆ ಪಾನಮತ್ತರಾಗಿ ಚಾಲನೆ ಮಾಡುವ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಯಶ್ ಕೈ ಜೋಡಿಸಿದ್ದಾರೆ.

ವಿಡಿಯೋ ಸಂದೇಶ ಮೂಲಕ ಯಶ್ ಕುಡಿದು ಗಾಡಿ ಓಡಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ನಮ್ಮ ಮಾತು ಕೇಳದಿದ್ದರೆ ಬೇಡ, ಕನಿಷ್ಠ ನಿಮ್ಮದೇ ಮೆಚ್ಚಿನ ನಟನ ಮಾತನ್ನಾದರೂ ಕೇಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.