ಅಪ್ಪ- ಮಕ್ಕಳು ಚಪ್ಪಲಿಯಿಂದ ಹೊಡೆದಾಡುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್‌ ವಿರುದ್ಧ ಡಿ.ಕೆ ಶಿವಕುಮಾರ್ ಆಕ್ರೋಶ.

ಬೆಂಗಳೂರು,ಜನವರಿ,21,2023(www.justkannada.in):  ಅಪ್ಪ- ಮಕ್ಕಳು ಚಪ್ಪಲಿಯಿಂದ ಹೊಡೆದಾಡುತ್ತಾರೆ ಎಂದು  ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ನಳೀನ್ ಕುಮಾರ್ ಕಟೀಲ್ ನಾಲಿಗೆಯಲ್ಲಿ ಮೂಳೆ ಇಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಳ್ಳಿ ಕಡೆ ಬಚ್ಚಲ ಬಾಯಿ ಅಂತಾರೆ. ಕಟೀಲ್ ಅವರ ಪಕ್ಷದಲ್ಲೇ ಹೊಡೆದಾಟ ನಡೆಯುತ್ತಿದೆ. ಬಸನಗೌಡ ಪಾಟೀಲ್ ಯತ್ಣಾಳ್, ಮುರುಗೇಶ್ ನಿರಾಣಿ ಬಹಿರಂಗ ಹೇಳಿಕೆ  ನೀಡುತ್ತಿದ್ದಾರೆ. ಕಟೀಲ್ ಗೆ ಪಕ್ಷದ ಮೇಲೆ ಹಿಡಿತ ಇಲ್ಲ ಎಂದು ಕಿಡಿಕಾರಿದರು.

ಆಗ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಅಂದರು . ಈಗ ಪ್ರಧಾನಿ  ಮೋದಿ ನೇತೃತ್ವದಲ್ಲಿ ಅಂತಿದ್ದಾರೆ . ಬಿಜೆಪಿಗೆ ರಾಜ್ಯದಲ್ಲಿ ನಾಯಕತ್ವ ಇಲ್ಲ ಡಿಕೆ ಶಿವಕುಮಾರ್ ಟೀಕಿಸಿದರು.

Key words: DK Shivakumar- outrage- against -Nalin Kumar Kateel